- Advertisement -
- Advertisement -
ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಜಿತ್ಕುಮಾರ್ ಆರಿಗ ಮತ್ತು ಉಪಾಧ್ಯಕ್ಷರಾಗಿ ಗಣೇಶ್ ಭಂಡಾರಿ ಆವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಚುನಾವಣೆ ಪುತ್ತೂರು ಸಹಕಾರ ಇಲಾಖೆಯ ಶಿವಲಿಂಗಯ್ಯ ಎಂ . ಅವರ ಉಪಸ್ಥಿತಿಯಲ್ಲಿ ಮಾ .18 ರಂದು ನಡೆಯಿತು .
ಸಂಘದ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇವರಿಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರಿಬ್ಬರೇ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ .
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸೇರಿದಂತೆ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯಿಂದ ಸ್ಪರ್ಧಿಸಿ ನಿರ್ದೇಶಕರಾದ ನಾರಾಯಣ ಆಚಾರ್ಯ , ಶ್ರೀನಾಥ ಕೆ.ಎಂ , ರಮೇಶ್ ನಿಲ್ಕ್ , ಹರಿಯಪ್ಪ ನಾಯ , ಪ್ರೇಮ ಎಂ . , ರಾಧ , ಪುರಂದರ , ಅಶೋಕ್ ರೈ , ತಿಮ್ಮಯ್ಯ ನಾಯ್ಕ ಚುನಾಯಿತರಾಗಿದ್ದರು . ಮಾಜಿ ಅಧ್ಯಕ್ಷ ಮುನಿರಾಜ ಅಜ್ಜಿ ಬೊಳಿಯಂಜಿ ಕಾಂಗ್ರೆಸ್ ಬೆಂಬಲಿತ ಏಕೈಕ ನಿರ್ದೇಶಕರಾಗಿದ್ದಾರೆ.
- Advertisement -