Wednesday, April 24, 2024
Homeಇತರಜೂನ್ 1ರಿಂದ ರಾಜ್ಯಾದ್ಯಂತ ಆಜಾನ್ ವಿರೋಧಿಸಿ ಎರಡನೇ ಸುತ್ತಿನ ಹೋರಾಟ;  ಪ್ರಮೋದ್ ಮುತಾಲಿಕ್

ಜೂನ್ 1ರಿಂದ ರಾಜ್ಯಾದ್ಯಂತ ಆಜಾನ್ ವಿರೋಧಿಸಿ ಎರಡನೇ ಸುತ್ತಿನ ಹೋರಾಟ;  ಪ್ರಮೋದ್ ಮುತಾಲಿಕ್

spot_img
- Advertisement -
- Advertisement -

ಹಾಸನ : ಸರ್ಕಾರವು ಆಜಾನ್ ವಿಚಾರದಲ್ಲಿ ದೃಢ ನಿಲುವಿನೊಂದಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಶ್ರೀರಾಮ ಸೇನಾ ವತಿಯಿಂದ ಜೂನ್ 1 ರಿಂದ ರಾಜ್ಯಾದ್ಯಂತ ಎರಡನೇ ಸುತ್ತಿನ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮಸಿದಿಗಳಲ್ಲಿ ಆಜಾನ್ ನಿಲ್ಲಿಸಬೇಕಾಗಿದೆ. ಈ ಮೊದಲು ನಿರ್ದಿಷ್ಟ ಪ್ರಮಾಣದ ಧ್ವನಿಯಲ್ಲಿ ಆಜಾನ್ ಮಾಡುವುದಕ್ಕೆ ಸೂಚನೆ ನೀಡಲಾಗಿತ್ತು. ಆದರೆ ಬಹತೇಕ ಮಸೀದಿಗಳಲ್ಲಿ ಇದು ಪಾಲನೆ ಆಗುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಈ ವಿಚಾರದ  ಬಗ್ಗೆ  ದೃಢ ನಿಲುವನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಅಗತ್ಯ ಕ್ರಮವನ್ನು ತೆಗೆದುಕೊಂಡು ಆಜಾನ್ ನಿಲ್ಲಿಸದಿದ್ದಾರೆ ಜೂನ್ 1 ರಿಂದ ರಾಜಾದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ. 

- Advertisement -
spot_img

Latest News

error: Content is protected !!