Sunday, June 29, 2025
Homeತಾಜಾ ಸುದ್ದಿಉಜಿರೆಯಲ್ಲಿ ಒಬ್ಬ ಉತ್ತಮ ಶ್ರಮಿಕ ಕಾರ್ಯಕರ್ತ-ಪ್ರಮೋದ್ ದಿಡುಪೆ

ಉಜಿರೆಯಲ್ಲಿ ಒಬ್ಬ ಉತ್ತಮ ಶ್ರಮಿಕ ಕಾರ್ಯಕರ್ತ-ಪ್ರಮೋದ್ ದಿಡುಪೆ

spot_img
- Advertisement -
- Advertisement -

ಬೆಳ್ತಂಗಡಿ: ವೈದ್ಯರು, ನರ್ಸ್‌, ಅರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರು ಕೊರೋನಾ ವಾರಿಯರ್ಸ್‌ ಆಗಿ ಕಾರ್ಯೋನ್ಮುಖರಾಗಿದ್ದು ನೋಡಿದ್ದೇವೆ. ಆದರೆ ಉಜಿರೆಯ ವ್ಯಾಪಾರಿಯೊಬ್ಬರು ಆಟೋ ಚಾಲಕ ಕೊರೋನಾ ವಿರುದ್ಧ ಸದ್ದಿಲ್ಲದೆ ಹೋರಾಡುತ್ತಿದ್ದಾರೆ.

ಹೌದು, ಉಜಿರೆಯಲ್ಲಿ ಈಶಾ ಫುಟ್ ವೇರ್ ಎಂಬ ಅಂಗಡಿಯ ಮಾಲಕರಾಗಿರುವ ಪ್ರಮೋದ್ ದಿಡುಪೆ, ಶ್ರಮಿಕ ಸ್ಪಂದನ ಹಾಗೂ ಸೇವಾಭಾರತಿ ಕೇಂದ್ರದ ಕಚೇರಿ, ಉಜಿರೆ ಸರಕಾರಿ ಆಸ್ಪತ್ರೆಯಲ್ಲಿ ಹಿರಿಯರ ಸೂಚನೆಯಂತೆ, ಕಾರ್ಯಕರ್ತರ ಸಹಕಾರದೊಂದಿಗೆ ಬಹಳ ಅಚ್ಚುಕಟ್ಟಾಗಿ ಪ್ರತಿನಿತ್ಯ ನಿರ್ವಹಿಸುತ್ತಿದ್ದಾರೆ.

ನಿನ್ನೆ ಕೊರೊನಾ ರೋಗಿಯೊಬ್ಬರು ಪ್ರಮೋದ್ ದಿಡುಪೆಯವರಿಗೆ ಕರೆ ಮಾಡಿ ‘ನಮ್ಮ ದಿಡುಪೆಯಲ್ಲಿರುವ ಮನೆಯ ಇಬ್ಬರಿಗೆ ಕೊರೊನಾ ಪಾಸಿಟಿವ್ ಅಗಿ ಅನಾರೋಗ್ಯ ಸರಿಲ್ಲ ಅದಕ್ಕೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೊಗಲು ಸೊಂಕಿತರು ಅನ್ನುವ ಭಾವನೆಯಿಂದ ಇಲ್ಲಿಯ ವಾಹನದವರು ಬರುತ್ತಿಲ್ಲ’ ಎಂದು ನೋವನ್ನು ತೋಡಿಕೊಂಡಿದ್ದರು. ತಕ್ಷಣ ಪ್ರಮೋದ್ ದಿಡುಪೆಯವರು ತಮ್ಮ ಕೇಂದ್ರದಿಂದ ಆಂಬುಲೆನ್ಸ್ ಅನ್ನು ತಾವೇ ಚಾಲಯಿಸಿಕೊಂಡು ಹೋಗಿ ಇಬ್ಬರು ರೋಗಿಗಳನ್ನು ಸೋಮಂದಡ್ಕ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಿದ್ದಾರೆ.

ಪ್ರಮೋದ್ ಮೂಲತಃ ದಿಡುಪೆ ನಿವಾಸಿಯಾಗಿದ್ದು, ಇವರು ಬೆಳ್ತಂಗಡಿ ಮಂಡಲದ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇವರು ಕಳೆದ ಮೂರು -ನಾಲ್ಕು ವರ್ಷಗಳಿಂದ ಉತ್ತಮ ಸಮಾಜಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಪಕ್ಷಭೇದ ಮಾಡದೆ ತಾಲೂಕಿನ ಪ್ರತಿ ಯುವಕರ ಹಾಗೂ ನೊಂದವರ ಕಷ್ಟಕ್ಕೆ ಹಗಲು ರಾತ್ರಿ ಎನ್ನದೆ ಧಾವಿಸಿ ಸದಾ ಸ್ಪಂದಿಸುತ್ತಾ ಇರುತ್ತಾರೆ ಅಲ್ಲದೆ ತನ್ನದೇ ಆದ ಅಭಿಮಾನಿ ಬಳಗವನ್ನು ಬೆಳ್ತಂಗಡಿ ತಾಲೂಕಿನ ಸುತ್ತಮುತ್ತ ಹೊಂದಿದ್ದಾರೆ.

- Advertisement -
spot_img

Latest News

error: Content is protected !!