- Advertisement -
- Advertisement -
ಸುಳ್ಯ: ನಿನ್ನೆ ಸಂಜೆ ಪಾಪಿಗಳಿಗೆ ಬಲಿಯಾದ ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆಗೆ ದುಷ್ಕರ್ಮಿಗಳು ಮೊದಲೇ ಪ್ಲ್ಯಾನ್ ಮಾಡಿದ್ದರು ಅನ್ನೋದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ನಿನ್ನೆ ರಾತ್ರಿ 9 ಗಂಟೆಗೆ ಪ್ರವೀಣ್ ತನ್ನ ಕೋಳಿ ಅಂಗಡಿ ಬಾಗಿಲು ಹಾಕುವುದನ್ನೇ ಹೊಂಚು ಹಾಕಿ ಕಾದು ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಪ್ರವೀಣ್ ಮೇಲೆ ದಾಳಿ ಮಾಡಿದ್ದಾರೆ. ದುಷ್ಕರ್ಮಿಗಳು KL1678 ಸಂಖ್ಯೆಯ splendor ಬೈಕ್ ನಲ್ಲಿ ಬಂದಿದ್ದರು ಎನ್ನಲಾಗಿದೆ. ಅದೇ ಬೈಕ್ ನಲ್ಲಿ ನಿನ್ನೆ ಬೆಳ್ಳಾರೆಯಲ್ಲಿ ಸುತ್ತಾಡಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಇನ್ನು ಬೈಕ್ ನಲ್ಲೇ ಬಂದು ಕೊಂದು ಬೈಕ್ ನಲ್ಲೇ ಎಸ್ಕೇಪ್ ಆಗಿ , ಬಳಿಕ ಬೈಕ್ ಅಡಗಿಸಿಟ್ಟು ಕಾರಿನಲ್ಲಿ ಹಂತಕರು ಪರಾರಿಯಾಗಿರೋ ಶಂಕೆ ವ್ಯಕ್ತವಾಗಿದೆ.
- Advertisement -