- Advertisement -
- Advertisement -
ಮೂಡುಬಿದಿರೆ: ಆರು ಕಳ್ಳತನ ಪ್ರಕರಣಗಳಲ್ಲಿ ವಾರೆಂಟ್ ಜಾರಿಯಾಗಿದ್ದ ಆರೋಪಿ ಅಬೂಬಕರ್ ಯಾನೆ ಅಬ್ದುಲ್ ಖಾದರ್ (ಇತ್ತೆ ಬರ್ಪೆ ಅಬೂಬಕರ್) ಎಂಬಾತನನ್ನು ಮೂಡುಬಿದಿರೆ ಪೊಲೀಸರು ಆ ಆಗಸ್ಟ್ 28ರಂದು ಬಂಧಿಸಿದ್ದಾರೆ.
ಠಾಣೆಯ ವಾರೆಂಟ್ ಜಾರಿ ಸಿಬ್ಬಂದಿಯಾದ ಹೆಚ್.ಸಿ. ರವೀಂದ್ರ, ಪಿ.ಸಿ. ಲಿಂಗೇಶ್ ಹಾಗೂ ಕೋರ್ಟ್ ಪಿ.ಸಿ. ರಮೇಶ್ ಅವರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಆರೋಪಿ ಸೆರೆಯಾಗಿದ್ದಾನೆ. ಬಂಧಿತನನ್ನು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆಪ್ಟೆಂಬರ್ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
- Advertisement -


