- Advertisement -
- Advertisement -
ನವದೆಹಲಿ: ಭಾರತದ ಕಲ್ಲಿದ್ದಲು ಸಚಿವಾಲಯ ವತಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ 41 ಕಲ್ಲಿದ್ದಲು ಗಣಿಗಳ ಹರಾಜಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
41 ವಾಣಿಜ್ಯ ಗಣಿ ಬ್ಲಾಕ್ ಗಳನ್ನು ಗುರುವಾರ ಹರಾಜಿಗಿಡಲಾಗಿದೆ. ಈ ಗಣಿಗಳನ್ನು ಖರೀದಿಸುವ ಸಂಸ್ಥೆಗಳು ವಾಣಿಜ್ಯ ಉದ್ದೇಶಕ್ಕೆ ಬಳಸಬಹುದಾಗಿದೆ. ಈ ಮೂಲಕ ದೇಶದ ವಿದ್ಯುತ್ ಪೂರೈಕೆ ಬೇಡಿಕೆಯನ್ನು ನೀಗಿಸುವುದು ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಸರ್ಕಾರದ ಉದ್ದೇಶ.
”ಕೊವಿಡ್ 19 ಸಂದರ್ಭವನ್ನು ಅವಕಾಶವನ್ನಾಗಿ ಬದಲಾಯಿಸೋಣ, ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಇದು ಮೊದಲ ಹೆಜ್ಜೆ, ಈ ಮೂಲಕ ಆಮದು ಪ್ರಮಾಣವನ್ನು ತಗ್ಗಿಸಬಹುದು” ಎಂದು ಪ್ರಧಾನಿ ಮೋದಿ ಹೇಳಿದರು.
2030ರ ವೇಳೆಗೆ 100 ಮಿಲಿಯನ್ ಟನ್ ನಷ್ಟು ಕಲ್ಲಿದ್ದಲು ಹೊಂದುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ ನಾಲ್ಕು ಪ್ರತ್ಯೇಕ ಯೋಜನೆಗಳನ್ನು ಇಂಧನ ಸಚಿವಾಲಯ ರೂಪಿಸಿದೆ. 20 ಸಾವಿರ ಕೋಟಿ ರು ಹೂಡಿಕೆಯಾಗಲಿದೆ ಎಂದು ಹೇಳಿದರು.
- Advertisement -