- Advertisement -
- Advertisement -
ಬಂಟ್ವಾಳ ; ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ಕಾರು ಚಲಾಯಿಸಿ ಪಿಕಪ್ ಚಾಲಕ ಅಪಾಯಕ್ಕೆ ಸಿಲುಕಿದ ಘಟನೆ ಬಂಟ್ವಾಳ ತಾಲೂಕಿನ ಕೆದಿಲದ ಕಾಂತುಕೋಡಿ ಸೇತುವೆಯಲ್ಲಿ ನಡೆದಿದೆ.
ಭಾರೀ ಮಳೆಗೆ ಬಂಟ್ವಾಳ ತಾಲೂಕಿನ ಕೆದಿಲದ ಕಾಂತುಕೋಡಿ ಸೇತುವೆ ಮುಳುಗಡೆಗೊಂಡಿತ್ತು. ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿತ್ತು. ಆದ್ರೇ ಇದನ್ನು ಲೆಕ್ಕಿಸದೇ ಪಿಕಪ್ ಚಾಲಕ ಸ್ಥಳೀಯರ ಎಚ್ಚರಿಕೆಯನ್ನು ದಿಕ್ಕರಿಸಿ ಸೇತುವೆ ಮೇಲಿನ ನೀರಿನ ಹರಿವಿನ ಮಧ್ಯೆಯೂ ದಾಟಲು ವಾಹನ ಚಲಾಯಿಸಿದ್ದಾನೆ.
ಈ ವೇಳೆ ಪಿಕಪ್ ವಾಹನ ಭಾರೀ ನೀರಿನ ರಭಸಕ್ಕೆ ಸೇತುವೆ ದಾಟಲು ಸಾಧ್ಯವಾಗಿಲ್ಲ. ಉಕ್ಕಿ ಹರಿಯುತ್ತಿದ್ದಂತ ನೀರಿನ ಮಧ್ಯೆಯೇ ಸೇತುವೆ ಮೇಲೆ ಸಿಲುಕಿದೆ. ಆಗ ಚಾಲಕ ರಕ್ಷಣೆಗಾಗಿ ಅಂಗಲಾಚಿದ್ದಾನೆ.ಬಳಿಕ ಅಲ್ಲಿದ್ದವರು ಪಿಕಪ್ ಚಾಲಕನನ್ನು ವಾಹನ ಸಹಿತ ರಕ್ಷಿಸಿದ್ದಾರೆ.
- Advertisement -