ಬೆಳ್ತಂಗಡಿ: ಎಂ.ಆರ್.ಪಿ.ಎಲ್. ಪೈಪ್ ಲೈನ್ ಕೊರೆದು ಇಂಧನ ತೈಲ ಕಳ್ಳತನಕ್ಕೆ ಯತ್ನಿಸಿ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದಲ್ಲಿ ನಡೆದಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ಪೆಟ್ರೋಲ್ ಕಳ್ಳತನ ಮಾಡಿರುವುದು ಬಯಲಾಗಿದ್ದು, ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಸ್ತೆ ಬದಿಯ ಮೋರಿಯ ಬಳಿ ಮಣ್ಣು ಅಗೆದು ಪೈಪನ್ನು ಕೊರೆದು ಪೈಪಿಗೆ ಗೇಟ್ ವಾಲ್ ಅಳವಡಿಸಿ ಪೈಪ್ ಮುಖಾಂತರ ಪೆಟ್ರೋಲ್ ಕಳ್ಳತನ ಮಾಡಿರುವುದು ಬಯಲಾಗಿದೆ. ಮುಖ್ಯ ಪೈಪ್ ಗೆ ಗೇಟ್ ವಾಲ್ ಹಾಕಿ ಸಣ್ಣ ಪೈಪ್ ಅಳವಡಿಸಲಾಗಿದ್ದು ಅಲ್ಲಿಂದ ಮುಂದಕ್ಕೆ ಪೈಪಿನ ಮೂಲಕವೇ ಕಳ್ಳತಮ ಮಡಲಾಗಿದೆ. ಆದರೆ ಈವರೆಗೆ ಪೈಪ್ ಎಲ್ಲಿ ಕೊನೆಗೊಳ್ಳುತ್ತಿದೆ, ಎಲ್ಲಿ ಪೆಟ್ರೋಲ್ ಶೇಖರಣೆ ಮಾಡಲಾಗುತ್ತಿತ್ತು ಎಂಬುದು ಪತ್ತೆಯಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಈ ಇಂಧನ ತೈಲ ಕಳವು ಜಾಲದ ಹಿಂದಿರುವವರ ಬಗ್ಗೆ ಪೊಲೀಸರಿಗೆ ಕೆಲವು ಸುಳಿವು ಲಭ್ಯವಾಗಿದೆ ಎನ್ನಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸರು ಪ್ರಕರಣದ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ. ಈ ಪ್ರದೇಶದಲ್ಲಿ ಈ ಹಿಂದೆಯೂ ಇದೇ ರೀತಿ ಪೆಟ್ರೋಲ್ ಕಳ್ಳತನ ನಡೆದಿತ್ತು. ಇದೀಗ ನಡೆದಿರುವ ಇಂಧನ ತೈಲ ಕಳವು ಜಾಲದ ವ್ಯಾಪ್ತಿ ಎಷ್ಟೆಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ.