- Advertisement -
- Advertisement -
ಮಂಗಳೂರು: ಗೋಲ್ಡ್ ಫಿಂಚ್ ಸಿಟಿ ಮೈದಾನದ ಬೃಹತ್ ಸಮಾವೇಶಕ್ಕೆ ಹೆಲಿಪ್ಯಾಡ್ನಿಂದ ವೇದಿಕೆಗೆ ಬರುವಾಗ ಪ್ರಧಾನಿ ಜೊತೆ ಕಾರಿನಲ್ಲಿ ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರು ಸಾಥ್ ನೀಡಿದರು.
ಸಿಎಂ ಬೊಮ್ಮಾಯಿ ವೇದಿಕೆಗೆ ಬಂದಾಗ ಸೈಲೆಂಟ್ ಆಗಿದ್ದ ಜನರು, ಸ್ವಾಗತದ ವೇಳೆ ಬೊಮ್ಮಾಯಿ ಹೆಸರು ಹೇಳುವಾಗಲೂ ಸೈಲೆಂಟ್ ಆಗಿದ್ದರು. ಆದರೆ ಯಡಿಯೂರಪ್ಪ ವೇದಿಕೆಗೆ ಬರುವ ವೇಳೆ ಮತ್ತು ವೈಯಕ್ತಿಕವಾಗಿ ಸ್ವಾಗತ ಕೋರುವ ವೇಳೆ ಬಿಎಸ್ವೈ ಪರ ಜಯಘೋಷ ಮೊಳಗಿತು. ಇದರೊಂದಿಗೆ, ಪ್ರಧಾನಿ ಮೋದಿ ಸಮ್ಮುಖದಲ್ಲಿ ಯಡಿಯೂರಪ್ಪ ಜನಪ್ರಿಯತೆ ವ್ಯಕ್ತವಾಗಿದ್ದು ವಿಶೇಷವಾಗಿತ್ತು. ಇನ್ನು ಸಿಎಂ ಬೊಮ್ಮಾಯಿ ಅವರಿಂದ ಸ್ವಾಗತ ಭಾಷಣ ನಡೆಯುವ ವೇಳೆಯೂ ಬಿಎಸ್ವೈ ಪರ ಘೋಷಣೆ ಮೊಳಗಿತು.
- Advertisement -