Saturday, May 18, 2024
Homeತಾಜಾ ಸುದ್ದಿಮಂಗಳೂರು: ಬೊಮ್ಮಾಯಿ ಬಂದಾಗ ನಿಶ್ಯಬ್ಧ: ಬಿಎಸ್‌ವೈ ಬಂದಾಗ ಜಯಘೋಷ

ಮಂಗಳೂರು: ಬೊಮ್ಮಾಯಿ ಬಂದಾಗ ನಿಶ್ಯಬ್ಧ: ಬಿಎಸ್‌ವೈ ಬಂದಾಗ ಜಯಘೋಷ

spot_img
- Advertisement -
- Advertisement -

ಮಂಗಳೂರು: ಗೋಲ್ಡ್ ಫಿಂಚ್ ಸಿಟಿ ಮೈದಾನದ ಬೃಹತ್ ಸಮಾವೇಶಕ್ಕೆ ಹೆಲಿಪ್ಯಾಡ್​​ನಿಂದ ವೇದಿಕೆಗೆ ಬರುವಾಗ ಪ್ರಧಾನಿ ಜೊತೆ ಕಾರಿನಲ್ಲಿ ಸಿಎಂ ಬೊಮ್ಮಾಯಿ‌ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರು ಸಾಥ್​ ನೀಡಿದರು.

ಸಿಎಂ ಬೊಮ್ಮಾಯಿ‌ ವೇದಿಕೆಗೆ ಬಂದಾಗ ಸೈಲೆಂಟ್ ಆಗಿದ್ದ ಜನರು, ಸ್ವಾಗತದ ವೇಳೆ ಬೊಮ್ಮಾಯಿ‌ ಹೆಸರು ಹೇಳುವಾಗಲೂ ಸೈಲೆಂಟ್ ಆಗಿದ್ದರು. ಆದರೆ ಯಡಿಯೂರಪ್ಪ ವೇದಿಕೆಗೆ ಬರುವ ವೇಳೆ ಮತ್ತು ವೈಯಕ್ತಿಕವಾಗಿ ಸ್ವಾಗತ ಕೋರುವ ವೇಳೆ ಬಿಎಸ್​ವೈ ಪರ ಜಯಘೋಷ ಮೊಳಗಿತು. ಇದರೊಂದಿಗೆ, ಪ್ರಧಾನಿ ಮೋದಿ ಸಮ್ಮುಖದಲ್ಲಿ ಯಡಿಯೂರಪ್ಪ ಜನಪ್ರಿಯತೆ ವ್ಯಕ್ತವಾಗಿದ್ದು ವಿಶೇಷವಾಗಿತ್ತು. ಇನ್ನು ಸಿಎಂ ಬೊಮ್ಮಾಯಿ ಅವರಿಂದ ಸ್ವಾಗತ ಭಾಷಣ ನಡೆಯುವ ವೇಳೆಯೂ ಬಿಎಸ್​ವೈ ಪರ ಘೋಷಣೆ ಮೊಳಗಿತು.

- Advertisement -
spot_img

Latest News

error: Content is protected !!