Friday, June 27, 2025
Homeಕರಾವಳಿಕಾರು ಢಿಕ್ಕಿಯಾಗಿ ಪಾದಚಾರಿಗಳ ಸಾವು ಪ್ರಕರಣ; ಅಪಘಾತವೆಸಗಿದ ಕಾರನ್ನು ವಶಕ್ಕೆ ಪಡೆದ ಪೊಲೀಸರು 

ಕಾರು ಢಿಕ್ಕಿಯಾಗಿ ಪಾದಚಾರಿಗಳ ಸಾವು ಪ್ರಕರಣ; ಅಪಘಾತವೆಸಗಿದ ಕಾರನ್ನು ವಶಕ್ಕೆ ಪಡೆದ ಪೊಲೀಸರು 

spot_img
- Advertisement -
- Advertisement -

ಸುಳ್ಯ: ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಕನಕಮಜಲುವಿನಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾದ ಕಾರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ತೂರು ಬೆಟ್ಟಂಪಾಡಿಯ ರಾಮಯ್ಯ ರೈ ಮತ್ತು ಕನಕಮಜಲಿನ ಜನಾರ್ದನ ರೈ ಅವರು ಫೆ. 8ರಂದು ರಾತ್ರಿ ನಡೆದ ಕಾರು ಢಿಕ್ಕಿ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಫೆ. 9ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಅಪಘಾತ ಎಸಗಿದ ಕಾರು ಚಾಲಕ ಘಟನ ಸ್ಥಳದಲ್ಲಿ ನಿಲ್ಲಸದೆ ಸುಳ್ಯದ ಕಡೆಗೆ ಚಲಾಯಿಸಿಕೊಂಡು ಹೋಗಿದ್ದು, ಈ ಕೃತ್ಯವೆಸಗಿದ ಕಾರಿನ ಪತ್ತೆ ಕಾರ್ಯ ಆರಂಭಿಸಿದ ಸುಳ್ಯ ಪೊಲೀಸರು ಅಪಘಾತ ಎಸಗಿದ್ದು ಇಕೋ ಕಾರು ಎನ್ನುವುದನ್ನು ಪತ್ತೆ ಮಾಡಿದ್ದರು ಎನ್ನಲಾಗಿದೆ.

ಈ ಕಾರು ಸುಳ್ಯದ ಬೀರಮಂಗಲ ನಿವಾಸಿಯದು ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!