- Advertisement -
- Advertisement -
ಕುಂಬಳೆ: ಬೈಕ್ ಢಿಕ್ಕಿ ಹೊಡೆದು ಪಾದಾಚಾರಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ಅಂಗಡಿಮೊಗರು ಪೆರ್ಲಡ ನಿವಾಸಿ ಅಬ್ದುಲ್ಲ ಕುಂಞ(60).
ಸಂಜೆ ಕುಂಬಳೆ ಪೇಟೆಯಲ್ಲಿ ನಡೆದು ಹೋಗುತ್ತಿದ್ದ ಅಬ್ದುಲ್ಲರಿಗೆ ಬೈಕ್ ಢಿಕ್ಕಿ ಹೊಡೆದಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು ಚೇತರಿಸಿದೆ ಮೃತಪಟ್ಟಿದ್ದಾರೆ.
ಇನ್ನು ಇದೇ ವೇಳೆ ಬೈಕ್ ನ ಹಿಂಬದಿ ಸೀಟಿನಲ್ಲಿದ್ದ 15 ವರ್ಷದ ಬಾಲಕನಿಗೂ ಗಾಯಗೊಂಡಿದ್ದು, ಈತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟ ಅಬ್ದುಲ ಅವರು ಬದಿಯಡ್ಕ ಹಾಗೂ ನೀರ್ಚಾಲ್ ನಲ್ಲಿರುವ ಲೈಟ್ಸ್ ಹಾಗೂ ಸೌಂಡ್ಸ್ ನ ಮೈಕ್ ಆಪರೇಟರ್ ಆಗಿದ್ದರು. ಬೈಕಿನಲ್ಲಿ ಇಬ್ಬರು ಆಪ್ರಾಪ್ತ ವಯಸ್ಕ ವಿದ್ಯಾರ್ಥಿಗಳಿದ್ದು ಬೈಕ್ ಚಾಲಕನನ್ನು ಕುಂಬಳೆ ಪೊಲೀಸರು ಬಂದಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
- Advertisement -