- Advertisement -
- Advertisement -
ಕಡಬ; ಇಲ್ಲಿನ ಎಡಮಂಗಲ ಎಂಬಲ್ಲಿ ದೈವ ನರ್ತನದ ವೇಳೆಯೇ ಕುಸಿದು ಬಿದ್ದು ಸಾವನ್ನಪ್ಪಿದ ದೈವ ನರ್ತಕ ಕಾಂತು ಅಜಿಲ ಅವರ ಕುಟುಂಬಕ್ಕೆ ಪಟ್ಲ ಫೌಂಡೇಷನ್ 1 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಣೆ ಮಾಡಿದೆ. ಆ ಮೂಲಕ ನೊಂದ ಕುಟುಂಬಕ್ಕೆ ಬೆಂಬಲವಾಗಿ ನಿಂತಿದೆ.
ಮಾರ್ಚ್ 30 ರಂದು ಇಡ್ಯಡ್ಕ ಎಂಬಲ್ಲಿ ಶಿರಾಡಿದೈವದ ನರ್ತನ ಸೇವೆ ವೇಳೆ ಏಕಾಏಕಿ ಕುಸಿದು ಬಿದ್ದು ಕಾಂತು ಅಜಿಲ ಸಾವನ್ನಪ್ಪಿದ್ದರು. ಇದೀಗ ಅವರ ಕುಟುಂಬಕ್ಕೆ ಪಟ್ಲ ಫೌಂಡೇಷನ್ 1 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಣೆ ಮಾಡಿದೆ.
- Advertisement -