Sunday, June 29, 2025
Homeತಾಜಾ ಸುದ್ದಿಬಂಟ್ವಾಳ: ಪಂಜಿಕಲ್ಲು ಭೂಕುಸಿತದ ದುರಂತಕ್ಕೆ ಆಡಳಿತ ವೈಫಲ್ಯವೇ ಕಾರಣ: ರಮಾನಾಥ ರೈ ಆರೋಪ

ಬಂಟ್ವಾಳ: ಪಂಜಿಕಲ್ಲು ಭೂಕುಸಿತದ ದುರಂತಕ್ಕೆ ಆಡಳಿತ ವೈಫಲ್ಯವೇ ಕಾರಣ: ರಮಾನಾಥ ರೈ ಆರೋಪ

spot_img
- Advertisement -
- Advertisement -

ಬಂಟ್ವಾಳ: ಮೂವರ ಸಾವಿಗೆ ಕಾರಣವಾದ ಪಂಜಿಕಲ್ಲು ಸಮೀಪದ ಮುಕ್ಕುಡದಲ್ಲಿ ನಡೆದ ದುರಂತ ಘಟನೆಗೆ ಆಡಳಿತ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆಪಾದಿಸಿದ್ದಾರೆ.

ಪಾಣೆಮಂಗಳೂರು ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ತ ವೈದ್ಯಕೀಯ ಚಿಕಿತ್ಸೆ ಸಕಾಲಕ್ಕೆ ದೊರಕಬೇಕಿತ್ತು. ಆದರೆ ಅದನ್ನು ಮಾಡುವಲ್ಲಿ ಆಡಳಿತ ವಿಫಲವಾಯಿತು ಎಂದು ಆರೋಪಿಸಿದರು. ಮಣ್ಣಿನಡಿಯಲ್ಲಿ ಸಿಲುಕಿದವರ ಜೀವ ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಸಕಾಲಕ್ಕೆ ಆಕ್ಸಿಜನ್‌ ಇರುವ ಆಂಬುಲೆನ್ಸ್‌, ವೈದ್ಯರ ತಂಡ ಅಲ್ಲಿರಬೇಕಿತ್ತು ಎಂದು ರೈ ಹೇಳಿದರು. ಘಟನೆಗಳು ಆದಾಗ ನೋಟಿಸ್‌ ಕೊಡುತ್ತಿದ್ದಾರೆ. ಬದಲಿ ವ್ಯವಸ್ಥೆ ಆಗಬೇಕಲ್ಲ. ಮನೆಯಿಂದ ತೆರವುಗೊಳಿಸಿದರೆ ಅವರು ಎಲ್ಲಿಗೆ ಹೋಗಬೇಕು, ಬದಲಿ ವ್ಯವಸ್ಥೆ ಮಾಡುವ ಜವಾಬ್ದಾರಿಯೂ ಪಂಚಾಯಿತಿಗಳಿಗಿದೆ ಎಂದರು.

ಪಂಜಿಕಲ್ಲಿನಲ್ಲಿ ಉಸಿರು ಗಟ್ಟಿದ ಒಬ್ಬ ಪೇಶೆಂಟ್‌, ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿದರು. ಬಂಟ್ವಾಳದ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳು ಇದೆ ಎಂದಾದರೆ ಯಾಕೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಿತ್ತು ಎಂದು ರಮಾನಾಥ ರೈ ಪ್ರಶ್ನಿಸಿದರು. ಗುಡ್ಡ ಕುಸಿತ, ಮಳೆ ಹಾನಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸಮರ್ಪಕವಾದ ಪರಿಹಾರ ನೀಡಬೇಕು. ಕಳೆದ ವರ್ಷ ಮಳೆಹಾನಿಯಲ್ಲಿ ಸರಿಯಾದ ಪರಿಹಾರ ಸಿಕ್ಕಿಲ್ಲ. ಮನೆಯನ್ನು ಬಹಳ ಆಸೆಪಟ್ಟು ನಿರ್ಮಿಸಿದ ಕಾರಣ ಹಾನಿಯಾಗುವ ಸಂದರ್ಭ ಕಂಗಾಲಾಗಿದ್ದಾರೆ. ಹೊಯ್ಗೆ, ಕಲ್ಲು, ಸಿಮೆಂಟ್‌ ಸಹಿತ ಗೃಹೋಪಯೋಗಿ, ಗೃಹ ನಿರ್ಮಾಣ ವಸ್ತುಗಳ ಬೆಲೆ ಹೆಚ್ಚಾಗಿದೆ. ಅದಕ್ಕೆ ಸರಕಾರ ಸ್ಪಂದಿಸಬೇಕು. ಸರಕಾರ ಹಣ ಬಿಡುಗಡೆ ಮಾಡುವಾಗ ಕಂಜೂಸುತನ ತೋರಿಸಬಾರದು ಎಂದು ರೈ ಒತ್ತಾಯಿಸಿದರು.

ಪಾಣೆಮಂಗಳೂರಿನ ಉಪ್ಪು್ಪಗುಡ್ಡೆಯಲ್ಲಿ ವಾಟರ್‌ ಟ್ಯಾಂಕ್‌ ಕುಸಿತದ ಭೀತಿಯಲ್ಲಿದ್ದು, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಅಬ್ಬಾಸ್‌ ಆಲಿ, ಚಂದ್ರಪ್ರಕಾಶ್‌ ಶೆಟ್ಟಿ, ಬೇಬಿ ಕುಂದರ್‌, ಸುದೀಪ್‌ ಕುಮಾರ್‌ ಶೆಟ್ಟಿ, ಸುದರ್ಶನ ಜೈನ್‌, ಜಯಂತಿ ಪೂಜಾರಿ, ಪದ್ಮಶೇಖರ ಜೈನ್‌ ಮತ್ತಿತರರಿದ್ದರು

- Advertisement -
spot_img

Latest News

error: Content is protected !!