ಬಂಟ್ವಾಳ; ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಹಲವರು ಬಿಜೆಪಿ ಸೇರ್ಪಡೆಯಾದರು.ಬರಿಮಾರು ಗ್ರಾ.ಪಂ. ಪಕ್ಷೇತರ ಸದಸ್ಯ ಹರಿಕೃಷ್ಣ ಬರಿಮಾರು, ಅವರ ಜೊತೆ ಗುರುಪ್ರಸಾದ್, ಶರತ್,ಲತೀಶ್, ಯಶೋಧರ ಇವರನ್ನು ಪಕ್ಷದ ಶಾಲು ಹಾಕಿ ಶಾಸಕ ರಾಜೇಶ್ ನಾಯ್ಕ್ ಹಾಗೂ ಪಕ್ಷದ ಅಧ್ಯಕ್ಷ ದೇವಪ್ಪ ಪೂಜಾರಿ ಅವರ ಸಮ್ಮುಖದಲ್ಲಿ ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಲಾಯಿತು.
ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಹರಿಕೃಷ್ಣ ಬರಿಮಾರು ಅವರು ಕಳೆದ ಗ್ರಾ.ಪಂ.ಚುನಾವಣಾ ಸಂದರ್ಭದಲ್ಲಿ ಪಕ್ಷದಿಂದ ಹೊರಬಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿ ಬಳಿಕ ದಿನಗಳಲ್ಲಿ ಬಿಜೆಪಿ ಪಕ್ಷದಿಂದ ದೂರ ಇದ್ದರು.
ಆದರೆ 2023 ರವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕರ ಅಭಿವೃದ್ಧಿಯನ್ನು ಹಾಗೂ ಪಕ್ಷದ ಮೇಲಿನ ಅಭಿಮಾನದಿಂದ ಮತ್ತೆ ಬಿಜೆಪಿಯತ್ತ ಮುಖಮಾಡಿದ್ದಾರೆ. ಇಂದು ಗ್ರಾ.ಪಂ.ಸದಸ್ಯ ಹಾಗೂ ಕಾರ್ಯಕರ್ತರು ಬಿಜೆಪಿ ಕಚೇರಿಯಲ್ಲಿ ಮರಳಿ ಸೇರ್ಪಡೆ ಯಾದರು.
ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಪ್ರಮುಖರಾದ ಸುದರ್ಶನ ಬಜ, ರವೀಶ್ ಶೆಟ್ಟಿ ಕರ್ಕಳ, ಗಣೇಶ್ ರೈ ಮಾಣಿ, ರಮಾನಾಥ ರಾಯಿ, ಪ್ರಕಾಶ್ ಆಂಚನ್, ಮೋಹನ್ ಪಿ.ಎಸ್.ಕಮಲಾಕ್ಷಿ ಪೂಜಾರಿ, ಸದಾಶಿವ ಬರಿಮಾರು,ಜಯಂತ್ ಮುಳಿಬೈಲು, ದಿನೇಶ್ ಶೆಟ್ಟಿ ದಂವೆದಾರ್,ಯಶೋಧರ ಕರ್ಬೆಟ್ಟು ಉದಯ ಕಾಂಜಿಲ, ಅಜಿತ್ ಶೆಟ್ಟಿ ಕಾವಳಮೂಡೂರು ಮತ್ತಿತರರು ಉಪಸ್ಥಿತರಿದ್ದರು.