ಬೆಳ್ತಂಗಡಿ:75ನೇ ಸ್ವಾತಂತ್ರ್ಯೋತ್ಸವದ ಪರವಾಗಿ ದಕ್ಷಿಣಕನ್ನಡ ಹಾಗೂ ಉಡುಪಿ ಮೊಬೈಲ್ ರಿಟೈಲರ್ಸ್ ಸಹ ಭಾಗಿತ್ವದಲ್ಲಿ ಬೆಳ್ತಂಗಡಿ ಮೊಬೈಲ್ ರಿಟೈಲರ್ಸ್ ವತಿಯಿಂದ ಕಲ್ಮಂಜ ಸರಕಾರಿ ಪ್ರೌಢಶಾಲೆಯಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಖ್ಯಉಪಾದ್ಯಾಯಿನಿ ಪೂರ್ಣಿಮಾ, ಎಸ್ ಡಿ ಎಂ ಉಪಾಧ್ಯಕ್ಷರು ಕರುಣಾಕರ, ಸದಸ್ಯರಾದ ಕೊರಗಪ್ಪ ,ಧರ್ಣಪ್ಪ, ಗ್ರಾಮಪಂಚಾಯತ್ ಸದಸ್ಯರಾದ ಪೂರ್ಣಿಮ, ಲೀಲಾವತಿ ಹಾಗೂ ಮಾಜಿ ಎಸ್ ಡಿಎಂಸಿ ಸದಸ್ಯ ಮೊನಪ್ಪ, ನಾಮನಿರ್ದೇಶಕರಾದ ಮಂಜುನಾಥ ಹಾಗೂ ಬೆಳ್ತಂಗಡಿ ಮೊಬೈಲ್ ರಿಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ವೀರಚಂದ್ರ ಜೈನ್, ಕಾರ್ಯದರ್ಶಿ ಚಿದಾನಂದ ಶೆಟ್ಟಿ, ಉಪಾಧ್ಯಕ್ಷರು ರಾಧಾಕೃಷ್ಣ, ಕೋಶಾಧಿಕಾರಿ ರಾಘವೇಂದ್ರ,ದ. ಕ ಅಸೋಸಿಯೇಷನ್ ಪ್ರತಿನಿಧಿ ಅಶೋಕ್ ಕುಮಾರ್, ಹಾಗೂ ಸಂಘದ ಸದಸ್ಯರಾದ ಇಲ್ಯಾಸ್, ವಿಶ್ವನಾಥ್, ಗೋಪಾಲ್,ರವರ ಸಮ್ಮುಖದಲ್ಲಿ ಶಾಲೆಯ ಕ್ರೀಡಾಂಗಣದಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗಿಡದ ಮುಂದಿನ ನಿರ್ವಹಣೆಯನ್ನು ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.