- Advertisement -
- Advertisement -
ಉಡುಪಿ; ಹೊಳೆಗೆ ಹಾರಿ ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾವಳಿ ಎಂಬಲ್ಲಿ ನಡೆದಿದೆ.ಕುಂದಾಪುರ ತಾಲೂಕು ಯಡಾಡಿ-ಮತ್ಯಾಡಿ ಗರಾಮದ ಬೆಮ್ಮರ್ಕಿ ನಿವಾಸಿ ನಂದಿ ಕುಲಾಲ್ (73) ಆತ್ಮಹತ್ಯೆ ಮಾಡಿಕೊಂಡವರು.
ನಂದಿ ಕುಲಾಲ್ ಅನಾರೋಗ್ಯದಿಂದ ಬಳಲುತ್ತಿದ್ದು. ಮೇ 28ರಂದು ಮನೆಯಿಂದ ಹೊರಗೆ ಹೋಗಿದ್ದರಪ. ಮನೆಯವರು ಅವರು ಗಾವಳಿಯಲ್ಲಿರುವ ಜಮೀನು ನೋಡಲು ಹೋಗಿರಬಹುದೆಂದು ಮನೆಯವರು ಭಾವಿಸಿದ್ದರು
.
ಆದರೆ ಮೇ 29ರಂದು ಬೆಳಗ್ಗೆಯೂ ಅವರು ಮರಳಿ ಬಾರದಾಗ ಗಾವಳಿಗೆ ಹೋಗಿ ಹುಡುಕಾಡಿದಾಗ ಅವರು ಗಾವಳಿ ಹೊಳೆಯತ್ತ ಹೋಗಿರುವುದು ಗೊತ್ತಾಗಿ ಹೊಳೆಯಲ್ಲಿ ಹುಡುಕಾಡಿದಾಗ ವೆಂಟಡ್ ಡ್ಯಾಮ್ನಲ್ಲಿ ಅವರ ಮೃತದೇಹ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -