ಉತ್ತರಪ್ರದೇಶ: ಎರಡನೇ ಮದುವೆಗೆ ಮನೆಯವರು ಒಪ್ಪುತ್ತಿಲ್ಲ ಅಂತಾ ವೃದ್ಧನೊಬ್ಬ ವಿದ್ಯುತ್ ಕಂಬ ಏರಿದ ಘಟನೆ ಉತ್ತರಪ್ರದೇಶದ ಮಾಧಾ ಭಾವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ಸಿಂಗ್ ಎಂಬಾತ ವಮನೆಯವರು ತನ್ನ ಮದುವೆಗೆ ಒಪ್ಪುತ್ತಿಲ್ಲ ಎಂದು ಕಂಬವೇರಿದ್ದಾರೆ. ಪೊಲೀಸರು, ಮಕ್ಕಳು ಹಾಗೂ ಮೊಮ್ಮಕ್ಕಳು ಎಲ್ಲರೂ ಸಿಂಗ್ರನ್ನ ಕೆಳಗಿಳಿಯುವಂತೆ ಮನವಿ ಮಾಡಿದರೂ ಸಹ ಸಿಂಗ್ ನಿರಾಕರಿಸಿದ್ದಾರೆ.
ಎರಡನೇ ಮದುವೆಯಾಗಲು ಒಪ್ಪಿಗೆ ನೀಡದೇ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಸಿಂಗ್ ಮಕ್ಕಳ ಎದುರು ಬೆದರಿಕೆ ಒಡ್ಡಿದ್ದಾರೆ. ಆದರೆ ಆ ಸಮಯದಲ್ಲಿ ಹೈ ಟೆನ್ಶನ್ ವೈರ್ನಲ್ಲಿ ವಿದ್ಯುತ್ ಪ್ರವಾಹವಾಗುತ್ತಿರಲಿಲ್ಲ. ಸಿಂಗ್ ಕುಟಂಬಸ್ಥರು ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದರಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು.
ಒಂದು ಗಂಟೆಯ ಬಳಿಕ, ಸ್ಥಳೀಯ ಯುವಕನೊಬ್ಬ ಕಂಬವನ್ನೇರಿ ವೃದ್ಧನಿಗೆ ಸಮಾಧಾನ ಮಾಡಿ ಆತನನ್ನ ಕೆಳಗೆ ಇಳಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾನೆ. ಯಾರನ್ನ ಮದುವೆಯಾಗೋಕೆ ಬಯಸಿದ್ದೀಯಾ ಎಂದು ಕೇಳಿದ್ರೆ…ನನ್ನನ್ನ ಯಾರ ಜೊತೆ ಬೇಕಿದ್ದರೂ ಮದುವೆ ಮಾಡಿ. ಆದರೆ ನನಗೊಂದು ಜೀವನ ಸಂಗಾತಿ ಅವಶ್ಯಕತೆ ಇದೆ ಎಂದು ಸಿಂಗ್ ಹೇಳಿದ್ದಾರೆ.
4 ವರ್ಷಗಳ ಹಿಂದೆ ಸಿಂಗ್ ಪತ್ನಿ ಮೃತಪಟ್ಟಿದ್ದರು. ಇದಾದ ಬಳಿ ಸಿಂಗ್ ಮದುವೆಯಾಗಲು ಇಚ್ಛಿಸಿದ್ದರೂ ಸಹ ಮಕ್ಕಳು ಇದಕ್ಕೆ ವಿರೋಧ ಹೇರಿದ್ದರು.