- Advertisement -
- Advertisement -
ಕಡಬ: ಮತಗಟ್ಟೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯುವಕನೊಬ್ಬ ಮತದಾನದಿಂದ ವಂಚಿತನಾದ ಘಟನೆ ಕಡಬ ತಾಲೂಕಿನ ಸುಳ್ಯ ವಿಧಾನಸಭಾ ಕ್ಷೇತ್ರದ ಕೆರ್ಮಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 101ರಲ್ಲಿ ನಡೆದಿದೆ.
ಸಾದಿಕ್ ಎಂಬವರ ಮತವನ್ನು ಅದೇ ಹೆಸರಿನ ಸಾದಿಕ್ ಕೆ. ಎಂಬವರು ಚಲಾಯಿಸಿದ್ದು, ಆ ಬಳಿಕ ಸಾದಿಕ್ ಅವರು ಆಗಮಿಸಿದ ಸಂದರ್ಭದಲ್ಲಿ ಮತ ಚಲಾವಣೆಯಾಗಿರುವುದು ಗಮನಕ್ಕೆ ಬಂದಿದೆ. ಇಬ್ಬರ ತಂದೆಯ ಹೆಸರು ಒಂದೇ ರೀತಿಯಾಗಿರುವುದರಿಂದ ಈ ವೇಳೆ ಕೆಲಕಾಲ ಗೊಂದಲಕ್ಕೆ ಉಂಟಾಗಿ ಕೊನೆಗೆ ಸಾದಿಕ್ ಗೆ ಮತ ಚಲಾಯಿಸಲು ಅವಕಾಶ ಸಿಗದೆ ವಾಪಾಸ್ಸಾಗಿದ್ದಾರೆ.
- Advertisement -