Saturday, June 28, 2025
Homeಕರಾವಳಿಉಡುಪಿಉಡುಪಿ ಹಿಜಾಬ್ ವಿವಾದ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ

ಉಡುಪಿ ಹಿಜಾಬ್ ವಿವಾದ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ

spot_img
- Advertisement -
- Advertisement -

ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಹಿಜಾಬ್ ವಿವಾದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ( NHRC ) ಇಂದು ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ .

ಈ ವಿವಾದಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಮ್ಯಾಜಿಸ್ಟ್ರೇಟ್ , ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ನೋಟಿಸ್ ನೀಡಿದೆ. ಪ್ರಕರಣದ ವಿವರಗಳು ಗೊಂದಲದ ಸಂಗತಿಯಾಗಿದೆ . ದೂರಿನಲ್ಲಿ ಮಾಡಲಾದ ಆರೋಪಗಳು ‘ ಶಿಕ್ಷಣದ ಹಕ್ಕು ಉಲ್ಲಂಘನೆಯನ್ನು ಒಳಗೊಂಡಿದ್ದು , ಸ್ವರೂಪದಲ್ಲಿ ಗಂಭೀರವಾಗಿದೆ .

ಆ ಕಾರಣದಿಂದ ಪ್ರಕರಣವು ವಿದ್ಯಾರ್ಥಿನಿಯರ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯನ್ನು ಒಳಗೊಂಡಿದೆ ಎಂದೂ ನೋಟಿಸ್ ನಲ್ಲಿ ಹೇಳಿದೆ . ಇದರೊಂದಿಗೆ ಕರ್ನಾಟಕದ ಉಡುಪಿಯ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದಕ್ಕಾಗಿ ಎಂಟು ವಿದ್ಯಾರ್ಥಿನಿಯರ ಪ್ರವೇಶವನ್ನು ನಿರ್ಬಂಧಿಸಿದ್ದು , ಸುಮಾರು ಒಂದು ತಿಂಗಳ ನಂತರ , ಅವರು ಇನ್ನೂ ತಮ್ಮ ತರಗತಿಗಳಿಗೆ ಪ್ರವೇಶಿಸಲು ಮತ್ತು ಪಾಠಕ್ಕೆ ಹಾಜರಾಗಲು ಹೋರಾಡುತ್ತಿದ್ದಾರೆ .

16 ರಿಂದ 19 ವರ್ಷದೊಳಗಿನ ಹುಡುಗಿಯರು ಡಿ 31 ರಿಂದ ಗೈರುಹಾಜರಾಗಿದ್ದಾರೆ ಎಂದು ದಾಖಲಿಸಲಾಗಿದೆ .

- Advertisement -
spot_img

Latest News

error: Content is protected !!