Saturday, May 4, 2024
Homeಕರಾವಳಿಬೆಳ್ತಂಗಡಿ : 76 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸೀಮಿತವಾದ ಪ್ರತಿಭಟನಾ ಜಾಥಾ:ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಆಂತರಿಕ...

ಬೆಳ್ತಂಗಡಿ : 76 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸೀಮಿತವಾದ ಪ್ರತಿಭಟನಾ ಜಾಥಾ:ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ ಬೆತ್ತಲೆ

spot_img
- Advertisement -
- Advertisement -

ಬೆಳ್ತಂಗಡಿ : ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಹಾಗೂ ಮುಗೇರಡ್ಕದಲ್ಲಿ 250 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಕಾಮಗಾರಿ ಸಮರ್ಪಕವಾಗಿಲ್ಲ ಸೇರಿದಂತೆ ಸರ್ಕಾರದ ಜನ ವಿರೋಧಿ ಯೋಜನೆಗಳ ವಿರುದ್ಧ ಜ 7 ರಂದು ಬೆಳ್ತಂಗಡಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದ್ದರು, ಬೆಳ್ತಂಗಡಿಯಿಂದ ಮುಗೇರಡ್ಕದವರೆಗೆ ವಾಹನ ಜಾಥಾದ ಮೂಲಕ ಮುಗೇರಡ್ಕಕ್ಕೆ ಹೋಗಿ ಅಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಆದರೆ ಪ್ರತಿಭಟನೆಯಲ್ಲಿ ಕೆಲವೇ ಕೆಲವು ಜನ ಅಂದರೆ 76 ಮಂದಿ ಭಾಗವಹಿಸಿದ್ದು ಅದಲ್ಲದೆ ಕೆಲವೇ ಕೆಲವು ವಾಹನಗಳು ಮಾತ್ರ ಜಾಥಾದಲ್ಲಿ ಇತ್ತು. ಕಾಂಗ್ರೆಸ್ ಪಕ್ಷದ ಅಂತರಿಕ ಕಚ್ಚಾಟ ಇದೀಗ ಮತ್ತೆ ಬೆತ್ತಲಾಗಿದೆ.

ಜ.8ರಂದು ಕಾಂಗ್ರೆಸ್ ಯುವ ನಾಯಕ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಆಯೋಜಿಸಿದ್ದ ನೇತ್ರಾವತಿ ಉಳಿಸಿ ಪ್ರತಿಭಟನೆಗೆ ಸಾಕಷ್ಟು ದಿನಗಳ ಪೂರ್ವ ತಯಾರಿ ನಡೆಸಲಾಗಿತ್ತು. ಈ ಪ್ರತಿಭಟನೆಗೆ 5 ಸಾವಿರಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆ ಕೂಡ ಇತ್ತು.ಆದರೆ ಧಿಡೀರ್ ಆಗಿ ಕಾಂಗ್ರೆಸ್ ಹಿರಿಯ  ಮುಖಂಡರುಗಳಾದ ವಸಂತ ಬಂಗೇರ ಹಾಗೂ ಗಂಗಾಧರ ಗೌಡ ಅವರು ಜ 7ರಂದು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಲ್ಲದೇ ರಕ್ಷಿತ್ ಶಿವರಾಂ ಪ್ರತಿಭಟನೆಗೆ ಬೆಂಬಲ ಇಲ್ಲ ಎಂಬ ಗೊಂದಲಕಾರಿ ಹೇಳಿಕೆಯನ್ನು ನೀಡಿದ್ದರು. ಆದರೆ ಜ.6ರಂದು ರಕ್ಷಿತ್ ಶಿವಾರಂ ಕಾಂಗ್ರೆಸ್ ಹಿರಿಯ ಮುಖಂಡರ ನೇತೃತ್ವದ ಪ್ರತಿಭಟನೆಗೆ ಸಾಥ್ ಕೊಡಲು ನಿರ್ಧರಿಸಿದರು. ಹೀಗಾಗಿ ಪ್ರತಿಭಟನೆಯಲ್ಲಿ ಸಾವಿರಾರು ಜನ ಸೇರುವ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆ ಕೂಡ ಸುಳ್ಳಾಗಿದೆ.ಅದಲ್ಲದೇ ರಕ್ಷಿತ್ ಶಿವರಾಂ ಮತ್ತು ಕಾರ್ಯಕರ್ತರು ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸದೇ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಡಿ.17ರಂದು  ಪ್ರಸನ್ನ ಕಾಲೇಜ್ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆತಿಥಿಯಾಗಿ ಭಾಗವಹಿಸಿದ ಕಬಡ್ಡಿ ಪಂದ್ಯಾಟದಲ್ಲೂ ಕಾಂಗ್ರೆಸ್ ಶಕ್ತಿ ಪ್ರದರ್ಶನ ವಿಫಲವಾಗಿತ್ತು.

ಪ್ರತೀ ಬಾರಿಯೂ ಕಾಂಗ್ರೆಸ್ ನ ಲೆಕ್ಕಾಚಾರ ತಲೆಕೆಳಗಾಗುತ್ತಿದೆ.ಈಗಾಗಲೇ ಮುಂದಿನ ವಿಧಾನ ಸಭಾ ಚುನಾವಣೆಗೆ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯುವ ನಾಯಕ ರಕ್ಷಿತ್ ಶಿವರಾಂ ಅವರ ಹೆಸರು ಕೇಳಿಬರುತ್ತಿದ್ದು ಅದರೆ ಇಬ್ಬರು ಹಿರಿಯ ನಾಯಕರುಗಳಾದ ವಸಂತ ಬಂಗೇರ ಹಾಗೂ ಗಂಗಾಧರ ಗೌಡ ಯಾವುದೇ ಕಾರಣಕ್ಕೂ ಹೊರಗಿನಿಂದ ಬಂದವರಿಗೆ ಇಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ ಏನಿದ್ದರೂ ನಮ್ಮಿಬ್ಬರಲ್ಲಿ ಒಬ್ಬರಿಗೆ ಹೈಕಮಾಂಡ್ ಟಿಕೇಟ್ ನೀಡುತ್ತದೆ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ.ಅದಲ್ಲದೇ ಪ್ರತಿಯೊಂದು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಣ ರಾಜಕೀಯ ಎದ್ದು ಕಾಣುತ್ತಿದ್ದು ನಾಯಕನ ಗೊಂದಲದಲ್ಲಿ ಕಾರ್ಯಕರ್ತರಿದ್ದಾರೆ.

 ಈ ಎಲ್ಲಾ ಬೆಳವಣಿಗೆಯಿಂದ ಈಗಾಗಲೇ ಕೈ ಕಾರ್ಯಕರ್ತರು ಭ್ರಮನಿರಸನಗೊಂಡಿದ್ದು ಈಗಾಗಲೇ ಹಲವಾರು ಮುಖಂಡರುಗಳು ಕಾಂಗ್ರೆಸ್ಸಿನಿಂದ ಬಿಜೆಪಿಗೆ ವಲಸೆ ಹೋಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು  ಕಾರ್ಯಕರ್ತರು ಪಕ್ಷ ಬಿಡುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ. ಅದಲ್ಲದೇ ಒಂದಷ್ಟು ಯುವ ಪಡೆಯನ್ನು ಹೊಂದಿರುವ ರಕ್ಷಿತ್ ಶಿವರಾಂ ಅವರಿಗೆ ಮುಂದಿನ ಟಿಕೇಟ್ ನೀಡಬೇಕು ನೀಡದಿದ್ದಲ್ಲಿ ಕಾಂಗ್ರೆಸ್ ಪತನ ಖಂಡಿತ ಎಂಬ ಮಾತುಗಳು ಕೂಡ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಅದಲ್ಲದೇ  ಮಾಜಿ ಶಾಸಕ ವಸಂತ ಬಂಗೇರ ಮಾಜಿ ಸಚಿವ ಗಂಗಾಧರ ಗೌಡ ಅವರ ನೇತೃತ್ವದ ಪ್ರತಿಭಟನೆ ಮುಂದಿನ ಚುನಾವಣೆಯ ಶಕ್ತಿ ಪ್ರದರ್ಶನ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ  ಇನ್ನೂರಷ್ಟೂ ಜನ ಸೇರದಿರುವುದು ಹಿರಿಯ ನಾಯಕರುಗಳ ಜನಪ್ರಿಯತೆ ಎಷ್ಟಿದೆ ಎಂಬುವುದು ಸಾಬೀತಾಗಿದೆ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಇನ್ನೇನು ಕೆಲವೇ ತಿಂಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು ನಾಯಕರುಗಳ ಕಚ್ಚಾಟಗಳಿಂದ   ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಮಾತ್ರ ಶೋಚನೀಯ ಸ್ಥಿತಿಗೆ ತಲುಪುತ್ತಿದೆ ಎಂದು ಕೆಲವು ಹಿರಿಯ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ಈ ಎಲ್ಲಾ ಕಾರಣಗಳಿಂದ  ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ ಅಥವಾ ಗಂಗಾಧರ್ ಗೌಡ ಇವರಿಬ್ಬರಲ್ಲಿ ಒಬ್ಬರು ಚುನಾವಣೆಗೆ ನಿಂತರೂ ಬಿಜೆಪಿ ಅಭ್ಯರ್ಥಿ ಶಾಸಕ ಹರೀಶ್ ಪೂಂಜ ಅವರು 50 ಸಾವಿರ ಮತಗಳಿಗಿಂತಲೂ ಅಧಿಕ ಅಂತರದಲ್ಲಿ ಗೆಲ್ಲಲಿದ್ದಾರೆ  ಎಂಬ  ಬಗ್ಗೆಯೂ ಈಗಲೇ ಚರ್ಚೆ ಪ್ರಾರಂಭವಾಗಿದೆ.

- Advertisement -
spot_img

Latest News

error: Content is protected !!