Monday, July 1, 2024
Homeಕರಾವಳಿಉಡುಪಿಶಿರ್ವ: ಎನ್.ಸಿ.ಸಿ ವಿಶೇಷ ತರಬೇತಿ ಶಿಬಿರ

ಶಿರ್ವ: ಎನ್.ಸಿ.ಸಿ ವಿಶೇಷ ತರಬೇತಿ ಶಿಬಿರ

spot_img
- Advertisement -
- Advertisement -

ಶಿರ್ವ: ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಡಿಸೆಂಬರ್ 23 ರಿಂದ ಡಿಸೆಂಬರ್ 31ರವರೆಗೆ 21 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ, ಉಡುಪಿ ವಲಯ ಸಂತ ಮೇರಿ ಮಹಾವಿದ್ಯಾಲಯ ಸೇರಿದಂತೆ ವಿವಿಧ ಕಾಲೇಜುಗಳ ಸುಮಾರು 70 ಕೆಡೆಟ್ ಗಳಿಗೆ ವಿಶೇಷ ತರಬೇತಿ ಶಿಬಿರವನ್ನು ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ಕೆ ಸಿಂಗ್ ಅವರ ನೇತೃತ್ವದಲ್ಲಿ ನಡೆಸಲಾಗುತ್ತದೆ.

ಎನ್.ಸಿ.ಸಿ. ಪರೀಕ್ಷೆಗಳಿಗೆ ಯುವ ಸೇನಾದಳದ ಕೆಡೆಟ್‍ಗಳನ್ನು
ಸಜ್ಜುಗೊಳಿಸುವ ಜೊತೆಗೆ ಅವರಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಈ ಶಿಬಿರದಲ್ಲಿ ಸಮುದಾಯ ಸೇವಾಗುಣ ಮೂಡಿಸುವ ಜೊತೆಗೆ ಕವಾಯತು, ಶಸ್ತ್ರ ತರಬೇತಿ, ಭೂಪಟ ಅಧ್ಯಯನ, ಫೈರಿಂಗ್ ಅಣುಕುಯುದ್ಧ ಪ್ರಾತ್ಯಕ್ಷಿಕೆಯ ಕುರಿತು ತರಬೇತಿ ನೀಡಿದರು .

ಹವಲ್ದಾರ್ ನರೇಶ ಸಿಂಗ್ ತೋಮರ್,ವಿನೋದ್ ರಾಯ್, ಮಹೇಂದ್ರ ಲಿಂಬು ತರಬೇತುದಾರ ರಾಗಿದ್ದಾರೆ.ಮೇಜರ್ ಪ್ರಕಾಶ್ ರಾವ್,ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್,ಲೆಫ್ಟಿನೆಂಟ್ ನವ್ಯ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!