Saturday, April 27, 2024
Homeಕರಾವಳಿಉಡುಪಿಉಡುಪಿ: ಕಾರ್ಕಳದಲ್ಲಿ ಮುತಾಲಿಕ್‌ ಸ್ಪರ್ಧೆ: ಶ್ರೀರಾಮಸೇನೆಯಿಂದಲೇ ವಿರೋಧ

ಉಡುಪಿ: ಕಾರ್ಕಳದಲ್ಲಿ ಮುತಾಲಿಕ್‌ ಸ್ಪರ್ಧೆ: ಶ್ರೀರಾಮಸೇನೆಯಿಂದಲೇ ವಿರೋಧ

spot_img
- Advertisement -
- Advertisement -

ಉಡುಪಿ: ಕಾರ್ಕಳದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಯುವುದಾಗಿ ಹೇಳಿದ್ದಾರೆ. ಆದ್ರೆ ಕಾರ್ಯಕರ್ತರೊಂದಿಗೆ ಮಾತುಕತೆಯಾಡದೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮುತಾಲಿಕ್‌ ವಿರುದ್ಧ ಶ್ರೀರಾಮಸೇನೆಯವರೇ ತಿರುಗಿ ಬಿದ್ದಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮುತಾಲಿಕ್‌ಗೆ ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಮಂಗಳೂರು ವಿಭಾಗಾಧ್ಯಕ್ಷ ಮೋಹನ್ ಭಟ್, ಮುತಾಲಿಕ್‌ ಕಾರ್ಕಳದಲ್ಲಿ ಸ್ಪರ್ಧೆ ಮಾಡುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಮುತಾಲಿಕ್‌ ಸೋಲನುಭವಿಸಿದ್ರೆ ಸಂಘಟನೆಗೆ ತೊಡಕಾಗುತ್ತೆ. ಕರಾವಳಿಯಲ್ಲಿ ಶ್ರೀರಾಮಸೇನೆ ಸಂಘಟನೆಯೇ ಒಡೆದು ಹೋಗುತ್ತೆ. ಹಾಗಾಗಿ ಈ ನಿರ್ಧಾರದಿಂದ ಮುತಾಲಿಕ್‌ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!