Monday, May 13, 2024
Homeಅಪರಾಧನೇಜಾರಿನಲ್ಲಿ ನಾಲ್ವರ ಕೊಲೆ ಪ್ರಕರಣ; ಮಾ.13ಕ್ಕೆ ಚೌಗಲೆ ನ್ಯಾಯಾಲಯಕ್ಕೆ ಹಾಜರು?

ನೇಜಾರಿನಲ್ಲಿ ನಾಲ್ವರ ಕೊಲೆ ಪ್ರಕರಣ; ಮಾ.13ಕ್ಕೆ ಚೌಗಲೆ ನ್ಯಾಯಾಲಯಕ್ಕೆ ಹಾಜರು?

spot_img
- Advertisement -
- Advertisement -

ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಗುರುವಾರ ಆಪಾದನೆ ಪೂರ್ವ ವಿಚಾರಣೆ ಆರೋಪಿ ಮೇಲೆ ಆಪಾದನೆ ನಡೆದಿದ್ದು, ಆರೋಪಿ ವಾಚಿಸುವ ಪ್ರಕ್ರಿಯೆಯನ್ನು ಮಾ.13ಕ್ಕೆ ನಿಗದಿ ಪಡಿಸಿ ನ್ಯಾಯಾಲಯ ಆದೇಶ ನೀಡಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ಪ್ರವೀಣ್ ನ್ಯಾಯಾಲಯಕ್ಕೆ ಚೌಗುಲೆಯನ್ನು ಹಾಜರುಪಡಿಸದೆ ನೇರವಾಗಿ ಜೈಲಿನಿಂದಲೇ

ವಿಡಿಯೋ ಕಾನ್ಸರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವ ಪ್ರಸಾದ್ ಆಳ್ವ ನೇಮಕಾತಿ ಪತ್ರದೊಂದಿಗೆ ಹಾಜರಾತಿ ಪ್ರಮಾಣಪತ್ರ(ಮೆಮೊ ಫೆಟರೇಷನ್) ವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಆರೋಪಿ ಪರವಾಗಿ ನ್ಯಾಯವಾದಿ ರಾಜೇಶ್ ನ್ಯಾಯಾಲಯದಲ್ಲಿ ವಕಾಲತ್ತು ಹಾಕಿದರು.

- Advertisement -
spot_img

Latest News

error: Content is protected !!