Sunday, June 29, 2025
Homeಉದ್ಯಮಎಂಎಸ್‌ಎಂಇ ಉದ್ಯಮ ಕುಸಿತದ ಅಂಚಿನಲ್ಲಿದೆ: ಸಚಿವ ಗಡ್ಕರಿ

ಎಂಎಸ್‌ಎಂಇ ಉದ್ಯಮ ಕುಸಿತದ ಅಂಚಿನಲ್ಲಿದೆ: ಸಚಿವ ಗಡ್ಕರಿ

spot_img
- Advertisement -
- Advertisement -

ನವದೆಹಲಿ: ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‌ಎಂಇ) ಕ್ಷೇತ್ರ ಕುಸಿಯುವ ಭೀತಿಯಲ್ಲಿದ್ದು , ಬೃಹತ್ ಕೈಗಾರಿಗಳು ಸಣ್ಣ ಕಂಪನಿಗಳ ಬಾಕಿಯನ್ನು ಒಂದು ತಿಂಗಳಲ್ಲಿಯೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಒತ್ತಾಯಿಸಿದ್ದಾರೆ.
ಎಂಎಸ್‌ಎಂಇ ಕ್ಷೇತ್ರ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಉಳಿವಿಗಾಗಿ ಹೋರಾಡುತ್ತಿವೆ ಎಂದು ಸಚಿವರು ಹೇಳಿದ್ದಾರೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಬೃಹತ್ ಕೈಗಾರಿಕೆಗಳು ಎಂಎಸ್‌ಎಂಇ ಘಟಕಗಳ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಗಡ್ಕರಿ ಒತ್ತಾಯಿಸಿದ್ದಾರೆ.
ನಿಮಗೆ ಏನೇ ಸಮಸ್ಯೆಗಳಿದ್ದರೂ ವಿಶ್ವಾಸ ಕಳೆದುಕೊಳ್ಳಬೇಡಿ. ಕ್ಷೇತ್ರದ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ ಎಂದು ಕೇಂದ್ರ ಸಚಿವರು ಎಂಎಸ್‌ಎಂಇಗಳಿಗೆ ಕರೆ ನೀಡಿದ್ದಾರೆ.

- Advertisement -
spot_img

Latest News

error: Content is protected !!