- Advertisement -
- Advertisement -
ಮಂಗಳೂರು: ನಿನ್ನೆ ಮಂಗಳೂರಿನಲ್ಲಿ ನಡೆದ ಬಿಜೆಪಿ ರೋಡ್ ಶೋ ವೇಳೆ ಮೋದಿ ಅಭಿಮಾನಿ ಕಲಾವಿದ ಬಿಡಿಸಿದ್ದ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ.
ತೊಕ್ಕೊಟ್ಟು ನಿವಾಸಿ ಯುವ ಚಿತ್ರ ಕಲಾವಿದ ಕಿರಣ್ ಪ್ರಧಾನಿ ಮೋದಿಗೆ ಕೊಡಲು ಮೋದಿಯವರ ತೈಲ ಚಿತ್ರ ರಚಿಸಿದ್ದರು. ನಿನ್ನೆ ರಾತ್ರಿ ರೋಡ್ ಶೋ ನಡೆದ ವೇಳೆ ತಾನು ಬಿಡಿಸಿದ್ದ ಚಿತ್ರವನ್ನು ಮೋದಿ ಎದುರು ಕಲಾವಿದ ಕಿರಣ್ ಪ್ರದರ್ಶಿಸಿದ್ದರು.
ಈ ವೇಳೆ ಎಸ್ ಪಿಜಿ ಅಧಿಕಾರಿಗಳ ಬಳಿ ಫೋಟೋ ಪಡೆಯುವಂತೆ ಮೋದಿ ಸೂಚಿಸಿದ್ದರು. ನಂತರ ಪ್ರಧಾನಿ ಸೂಚನೆಯಂತೆ ಎಸ್ ಪಿಜಿ ಅಧಿಕಾರಿಗಳು ಕಿರಣ್ ಬಳಿಯಿಂದ ಫೋಟೋ ಪಡೆದುಕೊಂಡಿದ್ದಾರೆ.
- Advertisement -