Saturday, May 18, 2024
Homeತಾಜಾ ಸುದ್ದಿಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘದ ಸಭೆ, ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘದ ಸಭೆ, ಪದಾಧಿಕಾರಿಗಳ ಆಯ್ಕೆ

spot_img
- Advertisement -
- Advertisement -

ಬೆಳ್ತಂಗಡಿ : ಆಶಾ ಸಾಲಿಯಾನ ಸಭಾಭವನದಲ್ಲಿ ದಿನಾಂಕ 29/09/2020 ರಂದು ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘದ ಸಭೆ ನಡೆಯಿತು. ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ರೆಟೈಲರ್ ಗಳು ಭಾಗವಹಿಸಿದ್ದರು. ದಕ್ಷಿಣ ಕನ್ನಡ ಮೊಬೈಲ್ ರೆಟೈಲರ್ಸ್ ಸಂಘದ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳು ಭಾಗವಹಿಸಿದ್ದರು.  ಈ ವೇಳೆ ಮೊಬೈಲ್ ರೆಟೈಲರ್ಸ್ ಗೆ ಆನ್ಲೈನ್ ನಿಂದ ಆಗುವ ತೊಂದರೆ ಹಾಗೂ ಕಂಪೆನಿಗಳಿಂದ ಆಗುತ್ತಿರುವ ಮೋಸದ ಬಗ್ಗೆ ಚರ್ಚೆ ನಡೆಸಿ ಎಲ್ಲರೂ ಒಟ್ಟಾಗಿ ಆನ್ಲೈನ್ ವಿರುದ್ಧ ಹಾಗೂ ಕಂಪೆನಿ ಗಳ ವಿರುದ್ಧ  ಹೋರಾಟ ಯಾವ ರೀತಿ ನಡೆಸಬೇಕು ಎಂದು ತಿಳಿಸಿ ಕೊಡಲಾಯಿತು. ಹಾಗೇ ಎಲ್ಲರೂ AIMRA(ಆಲ್ ಇಂಡಿಯಾ ಮೊಬೈಲ್ ರೆಟೈಲರ್ಸ್ ಅಸ್ಸೋಸಷನ್)ನ ಸಹಭಾಗಿತ್ವದಲ್ಲಿ ಹೋರಾಟ ನಡೆಸಲು ಈ ವೇಳೆ ಕರೆ ಕೊಡಲಾಯಿತು.

ಇನ್ನು ಇದೇ ವೇಳೆ, ಮೊದಲ ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಅದರಂತೆ, ಅಧ್ಯಕ್ಷರಾಗಿ ವೀರಚಂದ್ರ ಜೈನ್ (ಜೈನ್ ಮೊಬೈಲ್ಸ್ ),ಉಪಾಧ್ಯಕ್ಷರಾಗಿ  ಉಮೇಶ್ ಕುಮಾರ್ (ಮೊಬೈಲ್ ಪ್ಯಾಲೇಸ್),ರಾಧಾಕೃಷ್ಣ (ನಿಖಿಲ್ ಮೊಬೈಲ್ಸ್ ),ಶರೀಫ್ (ಹೈಟೆಕ್ ಮೊಬೈಲ್ಸ್ ),ಕಾರ್ಯದರ್ಶಿಯಾಗಿ ಚಿದಾನಂದ ಶೆಟ್ಟಿ (ಪ್ಲಾನೆಟ್ ಮೊಬೈಲ್ಸ್ ),ಜೊತೆ ಕಾರ್ಯದರ್ಶಿಯಾಗಿ ಹರೀಶ್( ಸ್ವಾತಿ ಮೊಬೈಲ್ ),ಕೋಶಾಧಿಕಾರಿಯಾಗಿ ರಾಘವೇಂದ್ರ (ಪಾಲ್ಸ್ ಮೊಬೈಲ್ಸ್), ಜಿಲ್ಲಾ ಪ್ರತಿನಿಧಿಯಾಗಿ ಅಶೋಕ್ ಕುಮಾರ್ (ಅಕ್ಷ ಮೊಬೈಲ್ ), ಮಹಮ್ಮದ್ಅರ್ಷದ್ (ಇಮೇಜ್ ಮೊಬೈಲ್ಸ್ ) ಅವರನ್ನು ಆಯ್ಕೆ ಮಾಡಲಾಯಿತು.

ಹಾಗೇ, ನಿರ್ದೇಶಕರಾಗಿ ಧನಂಜಯ (ಜೈನ್ ಮೊಬೈಲ್ಸ್ ಅಳದಂಗಡಿ), ಸಂದೀಪ್ (ಮೊಬೈಲ್ಸ್  ಜೋನ್ ),ರಾಜೇಶ್ (ಸಿದ್ದಿವಿನಾಯಕ ),ದಿನೇಶ್ ನಾಯಕ್ (ನಾಯಕ್ ಮೊಬೈಲ್ಸ್ ),ಸಅಬುಸಲಿ (ಬಿ.ಏ ಮೊಬೈಲ್ಸ್ ),ಇಲಿಯಾಸ್ (ಸ್ಮಾರ್ಟ್ ಮೊಬೈಲ್ಸ್ ), ವಸಂತ (ಪಾಲ್ಸ್ ಮೊಬೈಲ್ಸ್ ಕಕ್ಕಿಂಜೆ ),ಸಚಿನ್ (ಇಂಚರ ಮೊಬೈಲ್ಸ್ ),  ಶರೀಫ್ (ಸಸ್ಪೆನ್ಸ್ ಮೊಬೈಲ್ಸ್ ಕೊಕ್ಕಡ ) ಅವರನ್ನು ಆಯ್ಕೆ ಮಾಡಲಾಯಿತು.

- Advertisement -
spot_img

Latest News

error: Content is protected !!