ವಿಟ್ಲ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ 2 ಕೋಟಿ ಅನುದಾನದಲ್ಲಿ ಮಾಣಿ ಉಳ್ಳಾಲ್ತಿ ಮಾಡ ರಸ್ತೆ ಅಭಿವೃದ್ಧಿಗೆ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತುರವರು ಶಿಲಾನ್ಯಾಸ ನೆರವೇರಿಸಿದ್ರು.
ಈ ವೇಳೆ ಮಾತನಾಡಿದ ಶಾಸಕರು ಮಾಣಿ ದೈವಸ್ಥಾನದ ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ 2 ಕೋಟಿ ಅನುದಾನ ಒದಗಿಸಿದ್ದೇನೆ, ಆದರೆ ಇನ್ನಷ್ಟು ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಅನುದಾನ ಒದಗಿಸುವುದಾಗಿ ಹೇಳಿದರು.
ದೈವಸ್ಥಾನ ಹಾಗೂ ದೇವಸ್ಥಾನಗಳ ಅಭಿವೃದ್ಧಿಯ ಜೊತೆಯಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಡೆಸುವಂತಾಗಲೂ ಗ್ರಾಮದ ಜನರು ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.
ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ಹಿಂದೂ ಸಂಸ್ಕೃತಿಗೆ ಬೆಲೆಕೊಡುವ ವ್ಯಕ್ತಿ ನಮ್ಮ ಶಾಸಕರು, ಆದ್ದರಿಂದ ಅವರ ಕ್ಷೇತ್ರದಲ್ಲಿ ದೈವಸ್ಥಾನ, ದೇವಸ್ಥಾನಗಳ ಅಭುವೃದ್ಧಿ ಕೆಲಸಗಳೆಲ್ಲವೂ ಉತ್ತಮವಾಗಿ ನಡೆಯುತ್ತಿದೆ. ಶಾಸಕರು ರಾಷ್ಟ್ರ ಸೇವೆ, ದೇವರ ಸೇವೆ ಜನ ಸೇವೆ ಮಾಡುತ್ತಿದ್ದು ಮುಂದಿನ ಅವಧಿಯಲ್ಲಿ ಅವರಿಗೆ ಸಹಕಾರ ನೀಡಿ ಎಂದು ಅವರು ಹೇಳಿದರು.
ಮಾಣಿ ಶ್ರೀಉಳ್ಳಾಲ್ತಿ ದೇವಸ್ಥಾನದ ಆಡಳಿತ ಮೊಕ್ತಸರ ಸಚಿನ್ ರೈ ಮಾಣಿ ಗುತ್ತು ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ದೇವದಾಸ್ ಶೆಟ್ಟಿ, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಸುದರ್ಶನ್ ಬಜ ಮಾಧವ ಮಾವೆ, ಸಂತೋಷ್ ಶೆಟ್ಟಿ ಅರೆಬೆಟ್ಟು, ಸಂದೇಶ್ ಅರೆಬೆಟ್ಟು, ಕಮಲಾಕ್ಷಿ ಪೂಜಾರಿ, ಗಣೇಶ್ ರೈ ಮಾಣಿ, ಹರೀಶ್ ಮಾಣಿ, ಗೀತಾಚಂದ್ರಶೇಖರ್, ಪುಷ್ಪರ ಚೌಟ, ತನಿಯಪ್ಪ ಗೌಡ ನೇರಳಕಟ್ಟೆ ಇನ್ನಿತರರು ಉಪಸ್ಥಿತರಿದ್ರು.