- Advertisement -
- Advertisement -
ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ಪರಾರಿಯಲ್ಲಿ ನಿನ್ನೆ ನದಿಗೆ ಬಿದ್ದು ಸಾವನ್ನಪ್ಪಿರುವ ಧೃತ್ವಿ(2)ಯ ಮನೆಗೆ ಇಂದು ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಈ ಸಮಯದಲ್ಲಿ ಸರಕಾರದ ವತಿಯಿಂದ ಪರಿಹಾರ ಹಾಗು ಸಿಗುವ ಇತರ ವ್ಯವಸ್ಥೆಯನ್ನೂ ಆದಷ್ಟು ಬೇಗ ಸಿಗುವಂತೆ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾರಾಯಣ, ನಾವರ ಗ್ರಾಮ ಪಂಚಾಯತ್ ಸದಸ್ಯರಾದ ರವಿ ಹಾರಡ್ಡೆ, ಭಾಜಪ ಸೋಷಿಯಲ್ ಮೀಡಿಯಾ ಮಂಡಲ ಸಂಚಾಲಕರಾದ ಸುಪ್ರೀತ್ ಜೈನ್, ಸೋಷಿಯಲ್ ಮೀಡಿಯಾ ಸದಸ್ಯರಾದ ಜಯಂತ್ ಉಜಿರೆ ಶಾಸಕರ ಜೊತೆಗಿದ್ದರು.
- Advertisement -