Monday, June 30, 2025
Homeಕರಾವಳಿಶ್ರಮಿಕರ ಪಾಲಿಗೆ ಸಿಎಂ ಬಿಎಸ್ವೈ ಬಿಜೆಪಿ ಸರಕಾರ ಕಾಮಧೇನು: ಶಾಸಕ ಹರೀಶ್ ಪೂಂಜ

ಶ್ರಮಿಕರ ಪಾಲಿಗೆ ಸಿಎಂ ಬಿಎಸ್ವೈ ಬಿಜೆಪಿ ಸರಕಾರ ಕಾಮಧೇನು: ಶಾಸಕ ಹರೀಶ್ ಪೂಂಜ

spot_img
- Advertisement -
- Advertisement -

ಬೆಳ್ತಂಗಡಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಯಲ್ಲಿರುವ ವಿವಿಧ ವರ್ಗಗಳ ಪಾಲಿಗೆ 1610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡಿ ಸಂಕಷ್ಟದಲ್ಲಿರುವ ಶ್ರಮಿಕ ವರ್ಗದಪಾಲಿಗೆ ಕಾಮಧೇನುವಾಗಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಅಭಿನಂದನೆ ಸಲ್ಲಿಸಿರುವ ಶಾಸಕ ಹರೀಶ್ ಪೂಂಜ, ಈ ಪ್ಯಾಕೇಜ್ ರಾಜ್ಯದಲ್ಲಿನ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು, ಕ್ಷೌರಿಕರು, ಮಡಿವಾಳರು, ಕಟ್ಟಡ ನಿರ್ಮಾಣ ಕಾರ್ಮಿಕರು, ಹೂವು-ತರಕಾರಿ ಬೆಳೆಗಾರರು ನೇಕಾರರು ಹೀಗೆ ಸಮಾಜದ ವಿವಿಧ ವರ್ಗಗಳ ಶ್ರಮಿಕರ ಬದುಕಿಗೆ ಸಹಕಾರಿಯಾಗಲಿದೆ ಎಂದರು.

ಹೂ ಬೆಳೆಗಾರರಿಗೆ 1 ಹೆಕ್ಟೇರ್ ಗೆ 25 ಸಾವಿರ ಪರಿಹಾರ, ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್, 60 ಸಾವಿರ ಮಡಿವಾಳ ಕುಟುಂಬಕ್ಕೆ 5 ಸಾವಿರ ಪರಿಹಾರ. 2 ಲಕ್ಷದ 30 ಸಾವಿರ ಅಗಸ ಮತ್ತು ಕ್ಷೌರಿಕರಿಗೆ 5 ಸಾವಿರ ಪರಿಹಾರ. 7 ಲಕ್ಷದ 75 ಸಾವಿರ ಆಟೋ, ರಿಕ್ಷಾ ಚಾಲಕರಿಗೆ 5 ಸಾವಿರ ಪರಿಹಾರ. ಸಣ್ಣ ಅತಿಸಣ್ಣ ಉದ್ಯಮಗಳ ವಿದ್ಯುತ್ ಶುಲ್ಕ ಗಳಲ್ಲಿ ವಿನಾಯಿತಿ, ನೇಕಾರರ ಸಾಲ ಮನ್ನಾಕ್ಕೆ 80 ಕೋಟಿ ಬಿಡುಗಡೆ. ನೋಂದಾಯಿತ ಕಟ್ಟಡ ಕಾಮರ್ಿಕರಿಗೆ ಹೆಚ್ಚುವರಿಯಾಗಿ ಮತ್ತೆ ರೂ.3000 ಪರಿಹಾರ ಘೋಷಣೆ ಮಾಡಿದ್ದಾರೆ. ರಾಜ್ಯದ ಶ್ರಮಿಕ ವರ್ಗದ ಪರವಾಗಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆಗಳು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧನ್ಯವಾದಗಳು ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ.ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿ ಇರುವವರಿಗಾಗಿ ಸನ್ಮಾನ್ಯ…

Posted by Harish Poonja on Tuesday, 5 May 2020

- Advertisement -
spot_img

Latest News

error: Content is protected !!