Monday, June 30, 2025
Homeಕರಾವಳಿಅರೋಗ್ಯ ಕ್ಷೇತ್ರದ ಸಾಧಕ ಮಧ್ವಗುತ್ತು ಭೋಜ ಎಂ.ಶೆಟ್ಟಿ ನಿಧನಕ್ಕೆ ಶಾಸಕ ಹರೀಶ್ ಪೂಂಜ ಸಂತಾಪ

ಅರೋಗ್ಯ ಕ್ಷೇತ್ರದ ಸಾಧಕ ಮಧ್ವಗುತ್ತು ಭೋಜ ಎಂ.ಶೆಟ್ಟಿ ನಿಧನಕ್ಕೆ ಶಾಸಕ ಹರೀಶ್ ಪೂಂಜ ಸಂತಾಪ

spot_img
- Advertisement -
- Advertisement -

ಬೆಳ್ತಂಗಡಿ: ಮುಂಬೈ ನಗರದಲ್ಲಿ ವೈದ್ಯಕೀಯ ಸೇವೆಗೆ ಜನಪ್ರಿಯವಾಗಿರುವ ತುಂಗಾ ಆಸ್ಪತ್ರೆಗಳ ಸ್ಥಾಪಕ ಹಾಗೂ ಟ್ರಸ್ಟಿ ಮಧ್ವಗುತ್ತು ಭೋಜ ಮೋಹನ್ ಶೆಟ್ಟಿ ನಿಧನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂತಾಪ ಸೂಚಿಸಿದ್ದಾರೆ.

ಮಧ್ವಗುತ್ತು ಭೋಜ ಮೋಹನ್ ಶೆಟ್ಟಿ

ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಮಾಲಾಡಿ ಹೊಸಮನೆಯವರಾದ ಭೋಜ ಮೋಹನ್ ಶೆಟ್ಟಿಯವರು, ಮಡಂತ್ಯಾರು ಪರಿಸರದ ಹತ್ತಾರು ಸಂಘ-ಸಂಸ್ಥೆಗಳಿಗೆ, ಧಾರ್ಮಿಕ ಕೇಂದ್ರಗಳಿಗೆ ಕೊಡುಗೈ ದಾನಿಗಳಾಗಿ ಸಹಾಯ ಹಸ್ತವನ್ನು ಚಾಚುತ್ತಾ, ಯುವಕರನ್ನು ಹುರಿದುಂಬಿಸುತ್ತಿದ್ದರು. ಶ್ರೀಯುತರ ನಿಧನದಿಂದ ಮುಂಬೈ ಮತ್ತು ತುಳುನಾಡಿನ ನಡುವೆ ಇದ್ದ ಕೊಂಡಿಯೊಂದು ಕಳಚಿಬಿದ್ದಂತಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಶಾಸಕ ಹರೀಶ್ ಪೂಂಜ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!