Monday, April 29, 2024
Homeಕರಾವಳಿಯು.ಟಿ. ಖಾದರ್ ಬೇಕಾದ್ರೆ ಉಳ್ಳಾಲದಲ್ಲಿ ಪ್ರತ್ಯೇಕ ವಿವಿ ಮಾಡಿಕೊಳ್ಳಲಿ:ಸ್ಪೀಕರ್ ವಿರುದ್ದ ಶಾಸಕ ಭರತ್ ಶೆಟ್ಟಿ ಟೀಕೆ

ಯು.ಟಿ. ಖಾದರ್ ಬೇಕಾದ್ರೆ ಉಳ್ಳಾಲದಲ್ಲಿ ಪ್ರತ್ಯೇಕ ವಿವಿ ಮಾಡಿಕೊಳ್ಳಲಿ:ಸ್ಪೀಕರ್ ವಿರುದ್ದ ಶಾಸಕ ಭರತ್ ಶೆಟ್ಟಿ ಟೀಕೆ

spot_img
- Advertisement -
- Advertisement -

ಮಂಗಳೂರು: ಯು.ಟಿ. ಖಾದರ್ ಬೇಕಾದರೆ ಉಳ್ಳಾಲದಲ್ಲಿ ಬೇರೆ ಯುನಿವರ್ಸಿಟಿ ಮಾಡಿಕೊಳ್ಳಲಿ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಮಂಗಳೂರು ಶಾಸಕ ಮತ್ತು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಇಂದು ಹೇಳಿಕೆ ನೀಡಿದ ಬಿಜೆಪಿ ಶಾಸಕ ಭರತ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯ ವಿ ಯಾರೊಬ್ಬರ ಸ್ವತ್ತಲ್ಲ, ಅದು ನಮ್ಮೆಲ್ಲರ ಸ್ವತ್ತು ಎಂದು ಹೇಳಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಫಲಿತಾಂಶ ಕಡಿಮೆ ಆಗಿದೆ ಅಂದ ಕೂಡಲೇ ಬಕ್ರೀದ್ ಮತ್ತು ಕ್ರಿಸ್ಮಸ್ ನಿಲ್ಲಿಸುತ್ತೀರಾ ಎಂದು ಪ್ರಶ್ನೆ ಮಾಡಿರುವ ಭರತ್ ಶೆಟ್ಟಿ, ಇವೆರೆಲ್ಲಾ ಬಹುಸಂಖ್ಯಾತರ ಆಚಾರ ವಿಚಾರಕ್ಕೆ ತೊಂದರೆ ಕೊಡುತ್ತಲೇ ಬಂದಿದ್ದು ಈ ಬಾರಿ ಗಣೇಶೋತ್ಸವ ಪ್ರತಿ ಬಾರಿಯಂತೆಯೇ ನಡೆಯಲೇ ಬೇಕು, ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ವಿವಿಯಲ್ಲಿ ಗಣೇಶೋತ್ಸವ ಆಚರಣೆ ಕುರಿತ ವಿವಾದದ ಬಗ್ಗೆ ಸ್ಪೀಕರ್ ಖಾದರ್ ನೀಡಿದ್ದ ಹೇಳಿಕೆಗೆ ಬಿಜೆಪಿ ಶಾಸಕ ಭರತ್ ಶೆಟ್ಟಿ ತಿರುಗೇಟು ನೀಡಿದ್ದಾರೆ‌.ವಿವಿಯ ಆಂತರಿಕ ವಿಚಾರದಲ್ಲಿ ಹೊರಗಿನವರು ಯಾಕೆ ಹೋಗಿ ಮಧ್ಯಪ್ರವೇಶ ಮಾಡಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಪ್ರಶ್ನೆ ಮಾಡಿದ್ದರು.

- Advertisement -
spot_img

Latest News

error: Content is protected !!