Friday, May 17, 2024
Homeಅಪರಾಧಮನೆಯಿಂದ ಪೇಟೆಗೆ ಹೋದ ಬಾಲಕ ಧಿಡೀರ್ ನಾಪತ್ತೆ; ಪ್ರಕರಣದ ಕುರಿತು ಶಾಸಕ ಅಶೋಕ್ ರೈ ಸ್ಪಂದನೆ;...

ಮನೆಯಿಂದ ಪೇಟೆಗೆ ಹೋದ ಬಾಲಕ ಧಿಡೀರ್ ನಾಪತ್ತೆ; ಪ್ರಕರಣದ ಕುರಿತು ಶಾಸಕ ಅಶೋಕ್ ರೈ ಸ್ಪಂದನೆ; ಬಾಲಕ ಬೆಂಗಳೂರಿನಲ್ಲಿ ಪತ್ತೆ

spot_img
- Advertisement -
- Advertisement -

ಪುತ್ತೂರು: ಉಪ್ಪಿನಂಗಡಿ ಆದರ್ಶ ನಗರದಲ್ಲಿ ಓರ್ವ ಬಾಲಕನು ಮನೆಯಿಂದ ಪೇಟೆಗೆಂದು ತೆರಳಿದ್ದು, ನಂತರದಲ್ಲಿ ಬಾಲಕ ಧಿಡೀರನೆ ನಾಪತ್ತೆಯಾಗಿ, ಮನೆಯವರ ಹುಡುಕಾಟದ ಬಳಿಕ ಬೆಂಗಳೂರಿನಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಘಟನೆಯ ವಿವರ: ಜ.17 ರಂದು ಸಂಜೆ ಸುಮಾರು ಏಳು ಗಂಟೆಗೆ ಆದರ್ಶ ನಗರದ ನಿವಾಸಿ ಪ್ರಥಮ ಪಿಯುಸಿ ಬಾಲಕ, ಮನೆಯಿಂದ ಉಪ್ಪಿನಂಗಡಿ ಹೋಗಿ ಬರುವುದಾಗಿ ತಿಳಿಸಿದ್ದಾನೆ. ಆ ಬಳಿಕ ರಾತ್ರಿ ಸುಮಾರು 11 ಗಂಟೆಯವರೆಗೂ ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಮನೆಯವರು ರಾತ್ರಿ ಉಪ್ಪಿನಂಗಡಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕನು ಎಲ್ಲಿಯೂ ಪತ್ತೆಯಾಗದ ವಿಚಾರ ತಿಳಿದು ರಾತ್ರಿ ಶಾಸಕರಾದ ಅಶೋಕ್ ರೈ ಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಶಾಸಕರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ನಾಪತ್ತೆಯಾದ ಬಾಲಕನ ವಿವರಣೆಯನ್ನು ನೀಡಿದ್ದರು.

ಇನ್ನು ಪೊಲೀಸರು ಶಾಸಕರ ಸೂಚನೆಯಂತೆ ವಿವಿಧ ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣಗಳಿಗೆ ಮಾಹಿತಿ ರವಾನೆ ಮಾಡಿದ್ದರು. ಹುಡುಕಾಟದ ವೇಳೆ ನಾಪತ್ತೆಯಾದ ಬಾಲಕ ಬೆಳಿಗ್ಗಿನ ಜಾವ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ಕರೆದುಕೊಂಡು ಬರಲು ಪೋಷಕರು ಬೆಂಗಳೂರಿಗೆ ತೆರಳಿದ್ದಾರೆ.

ಪುತ್ತೂರಿನ ಶಾಸಕರು ತಡ ರಾತ್ರಿ ಕರೆ ಮಾಡಿದಾಗಲೂ ತುರ್ತು ಸ್ಪಂದನೆ ನೀಡುವ ಮೂಲಕ ಬಾಲಕನ ಪತ್ತೆಗೆ ನೆರವು ನೀಡಿ‌ದ್ದರಿಂದ, ಬಾಲಕನ ಕುಟುಂಬಸ್ಥರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!