- Advertisement -
- Advertisement -
ಬೈಂದೂರಿನ ಹಳ್ಳಿಹೊಳೆಯ ಪ್ರತಾಪ ಎಂಬ ಯುವಕ ಬೆಳಗಾವಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ, ಕೆಲಸಕ್ಕೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಪ್ರತಾಪ ( 29 ) ತಮ್ಮ ಮನೆಯಿಂದ ಬೆಳಗಾವಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದರು. ಇವರ ಬಗ್ಗೆ ತಿಳಿಯಲು ಕರೆ ಮಾಡಿದರೆ ಇವರ ದೂರವಾಣಿ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
- Advertisement -