- Advertisement -
- Advertisement -
ಚಿಕ್ಕಮಗಳೂರು ; ಹಂದಿ ಬೇಟೆಗೆ ಹೋದಾಗ ಮಿಸ್ ಫೈಯರ್ ಆಗಿ ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಉಳುವಾಗಿಲು ಗ್ರಾಮದ ಕಾಫಿತೋಟದಲ್ಲಿ ನಡೆದಿದೆ. ಕಾಫಿತೋಟಕ್ಕೆ ಶಿಕಾರಿಗೆ ಹೋದ ಕೆರೆಮಕ್ಕಿ ಗ್ರಾಮದ ಸಂಜು(33) ಮೃತ ಯುವಕ.
ಸಂಜು ರಾತ್ರಿ ಹಂದಿ ಬೇಟೆಗೆ ಅಂತ ಹೋಗಿದ್ದ. ಈ ವೇಳೆ ಸಂಜುಗೆ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆನೆ. ಈ ಘಟನೆ ಮೇ.17 ರ ತಡರಾತ್ರಿ ನಡೆದಿದೆ . .
ಹಂದಿ ಬೇಟೆಗೆ ತೆರಳಿದ್ದ ಯುವಕರ ಗುಂಪು , ಹಂದಿಯನ್ನು ಕಂಡ ತಕ್ಷಣ ಗುರಿ ಇಟ್ಟಿದ್ದಾರೆ. ಆದರೆ ಈ ವೇಳೆ ಹಾರಿಸಿದ ಗುಂಡು ಮಿಸ್ ಆಗಿ ಸಂಜು ಎದೆ ಭಾಗಕ್ಕೆ ತಗುಲಿದೆ . ಪರಿಣಾಮವಾಗಿ ಸಂಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ, ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆಯನ್ನು ನಡೆಸುತ್ತಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
- Advertisement -