Sunday, June 29, 2025
Homeಚಿಕ್ಕಮಗಳೂರುಚಿಕ್ಕಮಗಳೂರು; ಶಿಕಾರಿಗೆ ಹೋದಾಗ ಮಿಸ್ ಫೈಯರ್ : ಹಂದಿ ಬೇಟೆಗೆ ಹೋದವ ತಾನೇ ಬಲಿಯಾದ

ಚಿಕ್ಕಮಗಳೂರು; ಶಿಕಾರಿಗೆ ಹೋದಾಗ ಮಿಸ್ ಫೈಯರ್ : ಹಂದಿ ಬೇಟೆಗೆ ಹೋದವ ತಾನೇ ಬಲಿಯಾದ

spot_img
- Advertisement -
- Advertisement -

ಚಿಕ್ಕಮಗಳೂರು ; ಹಂದಿ ಬೇಟೆಗೆ ಹೋದಾಗ ಮಿಸ್ ಫೈಯರ್ ಆಗಿ ಯುವಕ ಸಾವನ್ನಪ್ಪಿರುವ ಘಟನೆ  ಚಿಕ್ಕಮಗಳೂರು ಜಿಲ್ಲೆಯ ಉಳುವಾಗಿಲು ಗ್ರಾಮದ ಕಾಫಿತೋಟದಲ್ಲಿ ನಡೆದಿದೆ. ಕಾಫಿತೋಟಕ್ಕೆ  ಶಿಕಾರಿಗೆ ಹೋದ ಕೆರೆಮಕ್ಕಿ ಗ್ರಾಮದ ಸಂಜು(33) ಮೃತ ಯುವಕ.

 ಸಂಜು ರಾತ್ರಿ ಹಂದಿ ಬೇಟೆಗೆ ಅಂತ ಹೋಗಿದ್ದ.  ಈ ವೇಳೆ ಸಂಜುಗೆ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆನೆ. ಈ ಘಟನೆ ಮೇ.17 ರ ತಡರಾತ್ರಿ ನಡೆದಿದೆ . .

ಹಂದಿ ಬೇಟೆಗೆ ತೆರಳಿದ್ದ ಯುವಕರ ಗುಂಪು , ಹಂದಿಯನ್ನು ಕಂಡ ತಕ್ಷಣ ಗುರಿ ಇಟ್ಟಿದ್ದಾರೆ. ಆದರೆ ಈ ವೇಳೆ ಹಾರಿಸಿದ ಗುಂಡು ಮಿಸ್ ಆಗಿ ಸಂಜು ಎದೆ ಭಾಗಕ್ಕೆ ತಗುಲಿದೆ . ಪರಿಣಾಮವಾಗಿ ಸಂಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ, ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆಯನ್ನು  ನಡೆಸುತ್ತಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

- Advertisement -
spot_img

Latest News

error: Content is protected !!