- Advertisement -
- Advertisement -
ಸುಬ್ರಹ್ಮಣ್ಯ: ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಬುಧವಾರ ಸುಬ್ರಹ್ಮಣ್ಯದ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು.
ಪ್ರವಾಹದಿಂದ ಹಾನಿಗೊಳಗಾದ ಯೇನೆಕಲ್ಲು ಸೇತುವೆ ಮತ್ತು ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದರು.
ನಂತರ ಹರಿಹರದ ಶ್ರೀ ಹರಿಹರೇಶ್ವರ ದೇವಳಕ್ಕೆ ತೆರಳಿ ಅಲ್ಲಿ ಹಾನಿಗೊಳಗಾದ ತಡೆಗೋಡೆ ಇತ್ಯಾದಿ ವೀಕ್ಷಿಸಿದ್ರು. ಸುಬ್ರಹ್ಮಣ್ಯ, ಮಾನಾಡು, ದೇವರಗದ್ದೆ, ಅಜ್ಜಿ ಹಿತ್ಲು, ಕಲ್ಲಜಡ್ಕ, ನೂಚಿಲ ಮೊದಲಾದ ಪ್ರದೇಶಗಳಲ್ಲಿ ನೆರೆಯಿಂದ ಹಾನಿಗೀಡಾದ ೩೧ ಮಂದಿಗೆ ಪರಿಹಾರದ ಚೆಕ್ ವಿತರಿಸಿದ್ರು.
- Advertisement -