ವಾಯುಪುತ್ರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ತೀವ್ರ ಹೃದಯಾಘಾತದಿಂದ ಇಂದು ಅವರು ಕೊನೆಯುಸಿರೆಳೆದಿದ್ದಾರೆ.
ಮತ್ತೊಂದೆಡೆ ನಟಿ ಮತ್ತು ಚಿರು ಪತ್ನಿ ಮೇಘನಾರಾಜ್ ತಾಯಿಯಾಗುತ್ತಿದ್ದಾರೆ. ಮಗುವ ಹುಟ್ಟುವ ಮುನ್ನವೇ ಚಿರು ಕಣ್ಮುಚ್ಚಿರುವುದು ಪತ್ನಿ ಹಾಗೂ ತಂದೆ, ತಾಯಿ, ಸಹೋದರರು, ಕುಟುಂಬ ವರ್ಗಕ್ಕೆ ಭರಿಸಲಾರದ ನೋವನ್ನುಂಟು ಮಾಡಿದೆ.
ಈ ನಡುವೆ ಚಿರಂಜೀವಿ ಸರ್ಜಾ ಅವರ ಮೃತ ದೇಹವನ್ನು ನೋಡಲು ಆಗಮಿಸಿದ್ದ ಕನ್ನಡದ ಹಿರಿಯ ನಟಿ ತಾರ ಅವರು ಚಿರು ಅವರ ಬಗ್ಗೆ ಮಾತನಾಡುತ್ತ ನಿನ್ನೆ ಮೊನ್ನೆ ಅವರನ್ನು ನೋಡಿದವರು ಕೂಡ ಕಣ್ಣೀರಿಡುತ್ತಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿ, ಕಣ್ಣೀರಿಟ್ಟರು.
ಇದೇ ವೇಳೇ ಅವರು ಮಾತನಾಡುತ್ತ ಚಿರು ಸಾವನ್ನಪ್ಪಿರುವ ಮಾಹಿತಿಯನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡೇ, ನನಗೆ ಶಾಕ್ ಆಗಿದ್ದು, ಅದು ಸುಳ್ಳು ಅಂತ ಅಂದುಕೊಂಡಿದ್ದೆ ಅಂತ ಹೇಳಿದರು. ಇನ್ನೂ ಇದೇ ವೇಳೆ ಅವರು ಮಾತನಾಡಿ ಅವರನ್ನು ಭೇಟಿಯಾಗಲು ಇಲ್ಲಿಗೆ ಆಗಮಿಸಿದ್ದ ವೇಳೆಯಲ್ಲಿ ಅವರ ಸಾವಿನ್ನ ಸುದ್ದಿಯನ್ನು ಕೇಳಿ ಶಾಕ್ ಆಗಿದೆ ಅಂತ ಹೇಳಿದರು. ಅವನ ರೂಪದಲ್ಲಿ ಅವನ ಮಗ ಪುಟ್ಟ ಚಿರಂಜೀವಿ ಮತ್ತೆ ಬರಲಿದ್ದಾನೆ ಅಂತ ಹೇಳಿದರು.