ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಅವರ ಕುಟುಂಬ, ಅಭಿಮಾನಿಗಳಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ. ಈ ನಡುವೆ ನಟ ಚಿರಂಜೀವಿ ಸರ್ಜಾ ಅವರ ಹನ್ನೊಂದನೇ ದಿನದ ಕಾರ್ಯ ಕೂಡ ನಡೆದಿದೆ. ಈ ಸಮಯದಲ್ಲಿ ಸರ್ಜಾರ ಪತ್ನಿ, ನಟಿ ಮೇಘನಾ ರಾಜ್ ಅಗಲಿದ ಪತಿಗೆ ಭಾವನಾತ್ಮಕ ಪತ್ರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಏನಿದೆ ಅಂತಹದು ಅದರಲ್ಲಿ ?
ಚಿರು ನಾನು ಸಾಕಷ್ಟು ಬಾರಿ ಪ್ರಯತ್ನಿಸಿದೆ. ಆದರೆ, ನಾನು ಏನು ಹೇಳಬೇಕೆಂದುಕೊಂಡನೋ ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ನನಗೆ ನೀನು ಏನಾಗಿದ್ದೆ ಎಂಬುದನ್ನು ಜಗತ್ತಿನಲ್ಲಿರುವ ಎಲ್ಲ ಪದಗಳಿಂದ ವರ್ಣಿಸಲು ಆಗುವುದಿಲ್ಲ. ನನ್ನ ಸ್ನೇಹಿತ, ನನ್ನ ಪ್ರಿಯಕರ, ನನ್ನ ಪಾಲುದಾರ, ನನ್ನ ಮಗು, ನನ್ನ ವಿಶ್ವಾಸ ಹಾಗೂ ನನ್ನ ಪತಿ… ಇದೆಲ್ಲದಕ್ಕಿಂತ ಹೆಚ್ಚು ನೀನು. ನನ್ನ ಆತ್ಮದ ಒಂದು ಭಾಗ ನೀನು ಚಿರು.
ಮನೆಯ ಬಾಗಿಲನ್ನು ನೋಡಿದಾಗಲೆಲ್ಲಾ ಅಗಾಧ ನೋವು ನನ್ನ ಹೃದಯದಲ್ಲಿ ಆವರಿಸಿಕೊಳ್ಳುತ್ತದೆ. ಪ್ರತಿದಿನ, ಪ್ರತಿಕ್ಷಣ ನಿಮ್ಮನ್ನು ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ ಎಂದು ಗೊತ್ತಾದಾಗ ನನ್ನ ಹೃದಯದ ಮುಳುಗಡೆಯಾದಂತೆ ಭಾಸವಾಗುತ್ತದೆ. ನನ್ನ ಹೃದಯ ಸಾವಿರ ಸಾವುಗಳಂತೆ ನಿಧಾನ ಮತ್ತು ನೋವಿನಿಂದ ಕೂಡಿದೆ. ಆದರೆ, ನೀ ನನ್ನ ಸುತ್ತ ಇರುವೆ ಎಂಬ ಮ್ಯಾಜಿಕ್ ಶಕ್ತಿಯು ಒಮ್ಮೆ ಬಂದು ಹೋಗುತ್ತದೆ. ಪ್ರತಿ ಕ್ಷಣ ನಾನು ಅಶಕ್ತಳೆಂಬ ಭಾವ ಕಾಡುತ್ತದೆ. ಆದರೂ ನೀನು ಗಾರ್ಡಿಯನ್ ಏಂಜೆಲ್ ರೀತಿ ನನ್ನ ಸುತ್ತಲೂ ಇರುತ್ತೀಯ ಎಂಬಂತೆ ಭಾಸವಾಗುತ್ತದೆ.
ನೀವು ನನ್ನನ್ನು ತುಂಬಾ ಪ್ರೀತಿಸುತ್ತೀರಿ, ನೀವು ನನ್ನನ್ನು ಒಬ್ಬಂಟಿಯಾಗಿ ಬಿಡಲು ಸಾಧ್ಯವೇ ಇಲ್ಲ. ನಿಮಗೆ ಸಾಧ್ಯವೇ ಚಿರು? ನಮ್ಮ ಪುಟಾಣಿಯೇ ನನಗೆ ನೀವು ನೀಡಿರುವ ಅದ್ಭುತವಾದ ಉಡುಗೊರೆ, ನಮ್ಮ ಪ್ರೀತಿಯ ಸಂಕೇತವಾಗಿದೆ. ಈ ಸಿಹಿಯಾದ ಉಡುಗೊರೆಗೆ ನಾನು ಶಾಶ್ವತವಾಗಿ ಋಣಿಯಾಗಿರುತ್ತೇನೆ. ಮಗುವಾಗಿ ನಿಮ್ಮನ್ನು ಮರಳಿ ಪಡೆಯುವುದಕ್ಕೆ ಕಾಯಲು ನನ್ನಿಂದ ಆಗುತ್ತಿಲ್ಲ. ಮರಳಿ ನಿಮ್ಮನ್ನು ಬಿಗಿಯಾಗಿ ಹಿಡಿದಿಕೊಳ್ಳುವುದಕ್ಕೆ ಕಾಯಲು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಮಗು ಮುಖವನ್ನು ನೋಡುವುದಕ್ಕೆ ಕಾಯಲು ಆಗುತ್ತಿಲ್ಲ. ಇಡೀ ರೂಮಿನ ತುಂಬಿರುತ್ತಿದ್ದ ನಿಮ್ಮ ನಗೆಯನ್ನು ಕೇಳುವುದಕ್ಕೆ ಕಾಯಲು ಸಾಧ್ಯವಾಗುತ್ತಿಲ್ಲ. ನಾನು ನಿಮಗಾಗಿ ಕಾಯುತ್ತಿದ್ದರೆ, ಮತ್ತೊಂದು ಕಡೆಯಿಂದ ನೀವು ನನಗಾಗಿ ಕಾಯುತ್ತಿದ್ದೀರಾ.
ನಾನು ಉಸಿರಾಡುವವರೆಗೂ ನೀವು ಬದುಕಿರುತ್ತೀರಿ, ನೀವು ನನ್ನಲ್ಲಿದ್ದೀರಿ ಐ ಲವ್ ಯು ಎಂದು ಸುದೀರ್ಘವಾಗಿ ಮೇಘನಾ ಬರೆದುಕೊಂಡಿದ್ದಾರೆ.