Sunday, May 5, 2024
Homeಕರಾವಳಿಸುಳ್ಯ; ಮದುವೆ ಮಂಟಪಕ್ಕೆ ಬಾರದ ವರ; ಮದುಮಗನ ಹೆಂಡ್ತಿ ದೂರು ಕೊಡುತ್ತಿದ್ದಂತೆ ಕ್ಯಾನ್ಸಲ್ ಆಯ್ತು ಮದುವೆ

ಸುಳ್ಯ; ಮದುವೆ ಮಂಟಪಕ್ಕೆ ಬಾರದ ವರ; ಮದುಮಗನ ಹೆಂಡ್ತಿ ದೂರು ಕೊಡುತ್ತಿದ್ದಂತೆ ಕ್ಯಾನ್ಸಲ್ ಆಯ್ತು ಮದುವೆ

spot_img
- Advertisement -
- Advertisement -

ಸುಳ್ಯ;  ಇಲ್ಲಿನ ಪುರಭವನದಲ್ಲಿ ನಡೆಯುಬೇಕಿದ್ದ ಮದುವೆಯೊಂದು ವರ ಬಾರದ ಹಿನ್ನೆಲೆ ರದ್ದಾದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದ ಉಬರಡ್ಕ ಗ್ರಾಮದ ಯುವತಿಗೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು. ಫೆ.9ರಂದು ಅಂದರೆ ಇಂದು ಕೆ.ವಿ.ಜಿ. ಪುರಭವನದಲ್ಲಿ ಮದುವೆ ನಡೆಯಬೇಕಾಗಿತ್ತು. 

ಮದುಮಗನ ಕಡೆಯ ಬಂಧು ಮಿತ್ರರು ಆಗಮಿಸಿ ಎಲ್ಲಾ ಸಿದ್ಧತೆ ಪೂರ್ಣಗೊಂಡಿತ್ತು. 500 ಮಂದಿಗೆ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತ್ತು.ಆದರೆ ಎಲ್ಲಿ ನೋಡಿದರೂ ವರ ನಾಪತ್ತೆ.  ವರನ  ಫೋನ್ ನಂಬರಿಗೆ ಕರೆ ಮಾಡಿದಾಗ  ಸ್ವಿಚ್‌ ಆಫ್ ಆಗಿತ್ತು. ಹೀಗಾಗಿ ವಧುವಿನ ಕಡೆಯವರು ಕಂಗಾಲಾಗಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಅಸಲೀಯತ್ತು ಬಯಲಾಗಿದೆ.

ವರನಿಗೆ ಈ ಹಿಂದೆ ಒಂದು ಮದುವೆಯಾಗಿದ್ದು,ಆತನ  ಹೆಂಡತಿ ಗಂಡನ ವಿರುದ್ಧ ಬೆಳ್ಳಾರೆ ಪೋಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದಾಳೆ ಅನ್ನೋದು ಗೊತ್ತಾಗಿದೆ. ಕಡೆಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಧುವಿನ ಕಡೆಯವರು ಸಭಾಂಗಣದಿಂದ ತೆರಳಿದ್ದು ಮದುವೆ ರದ್ದುಗೊಂಡಿದೆ.

ಇನ್ನು ಸಿದ್ಧಗೊಂಡಿದ್ದ ಊಟವನ್ನು ಹಾಸ್ಟೆಲ್‌ಗಳಿಗೆ ಕೊಡಲಾಗಿದೆ ಎನ್ನಲಾಗಿದೆ. ಇನ್ನು ನಾಪತ್ತೆಯಾದ ವರ ಮಹಾಶಯ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲಯ

- Advertisement -
spot_img

Latest News

error: Content is protected !!