Tuesday, May 7, 2024
Homeಕರಾವಳಿಪುತ್ತೂರು: ಇತ್ತ ಮನ್ವಿತ್ ರೈ ವಿರುದ್ಧ ಗೃಹ ಸಚಿವರಿಗೆ ಜಯಕರ್ನಾಟಕ ಸಂಘಟನೆ ದೂರು: ಅತ್ತ ಥೈಲ್ಯಾಂಡ್...

ಪುತ್ತೂರು: ಇತ್ತ ಮನ್ವಿತ್ ರೈ ವಿರುದ್ಧ ಗೃಹ ಸಚಿವರಿಗೆ ಜಯಕರ್ನಾಟಕ ಸಂಘಟನೆ ದೂರು: ಅತ್ತ ಥೈಲ್ಯಾಂಡ್ ನಲ್ಲಿ ಬರ್ತಡೇ ಪಾರ್ಟಿಯಲ್ಲಿ ಹುಡುಗಿಯರ ಮೇಲೆ ಹಣ ಎಸೆಯುತ್ತಿರುವ ವಿಡಿಯೋ ವೈರಲ್

spot_img
- Advertisement -
- Advertisement -

ಪುತ್ತೂರು: ನಟಿ ಅನುಷ್ಕಾ ಶೆಟ್ಟಿ ಸಹೋದರ, ಉದ್ಯಮಿ ಗುಣರಂಜನ್ ಶೆಟ್ಟಿ ಕೊಲೆಗೆ ಸಂಚು ರೂಪಿಸಲಾಗುತ್ತಿದೆ  ಎಂಬ ಆರೋಪದಡಿ ಈಗಾಗಲೇ ಜಯ ಕರ್ನಾಟಕ ಸಂಘಟನೆ ಮನ್ವಿತ್ ರೈ ವಿರುದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ದೂರು ನೀಡಿದೆ.

ಆರೋಪ ಕೇಳಿ ಬರುತ್ತಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಮನ್ಮಿತ್ ರೈ, ನನಗೂ ಇದಕ್ಕೂ ಸಂಬಂಧವಿಲ್ಲ. ಸದ್ಯ ನಾನು ಬ್ಯುಸಿನೆಸ್ ವಿಚಾರಕ್ಕೆ ವಿದೇಶಕ್ಕೆ ಬಂದಿದ್ದೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ  ಥೈಲ್ಯಾಂಡ್ನಲ್ಲಿ ಮನ್ಮಿತ್ ರೈ ಭರ್ಜರಿ ಪಾರ್ಟಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹುಡುಗಿಯರ ಮೇಲೆ ಕಂತೆ ಕಂತೆ ಹಣ ಎಸೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಹುಟ್ಟುಹಬ್ಬದ ಪಾರ್ಟಿಗೆಂದು ಮನ್ಮಿತ್ ರೈ ಭಾರತದಿಂದ ಥೈಲ್ಯಾಂಡ್​ಗೆ ತನ್ನ ಸ್ನೇಹಿತರನ್ನು ಕರೆಸಿಕೊಂಡಿದ್ದಾರಂತೆ. ಈ ವೇಳೆ ಸ್ನೇಹಿತರ ಜೊತೆ ಸೇರಿ ಮೋಜು ಮಸ್ತಿ ಮಾಡಿದ್ದಾರೆ. ನೃತ್ಯ ಮಾಡುವ ಹುಡುಗಿಯರ ಮೇಲೆ ದುಡ್ಡು ಎಸೆದಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಮನ್ಮಿತ್ ರೈ ಮುತ್ತಪ್ಪ ರೈ ಸಂಬಂಧಿ. ಈ ಹಿಂದೆ ಗುಣ ರಂಜನ್ ಮತ್ತು ಮನ್ಮಿತ್ ಒಟ್ಟಿಗೆ ಇದ್ದರು. ಬಳಿಕ ಪರಸ್ಪರ ದೂರವಾಗಿದ್ದರು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಇದು ಯಾವಾಗಿನ ವಿಡಿಯೋ ಹಳೆಯದ್ದೋ ಅಥವಾ ಇತ್ತೀಚಿನದ್ದೋ ಎಂಬ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.

- Advertisement -
spot_img

Latest News

error: Content is protected !!