Friday, May 3, 2024
Homeಕರಾವಳಿಮಂಗಳೂರು;ಪಟಾಕಿ ಅಂಗಡಿ ಮಾಲೀಕನಿಗೆ ಜೀವಬೆದರಿಕೆ, ದೂರು ದಾಖಲು

ಮಂಗಳೂರು;ಪಟಾಕಿ ಅಂಗಡಿ ಮಾಲೀಕನಿಗೆ ಜೀವಬೆದರಿಕೆ, ದೂರು ದಾಖಲು

spot_img
- Advertisement -
- Advertisement -

ಮಂಗಳೂರು: ಪಟಾಕಿ ಅಂಗಡಿ ಮಾಲೀಕನಿಗೆ ಜೀವಬೆದರಿಕೆ ಹಾಕಿರುವ ಬಗ್ಗೆ ಮಂಗಳೂರಿನ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂದರು ಪ್ರದೇಶದಲ್ಲಿ ಪಟಾಕಿ ಅಂಗಡಿ  ಹೊಂದಿರುವ  ಮುರಳೀಧರ ಪೈ ಎಂಬವರಿಗೆ ಭಾನುವಾರ  ಸಂಜೆ 6:30ರ ವೇಳೆಗೆ ಕರೆ ಮಾಡಿದ ಅನ್ಯ ವ್ಯಕ್ತಿಯೊಬ್ಬ 5 ಲಕ್ಷ ರೂ.ಮೌಲ್ಯದ ಪಟಾಕಿ ಬೇಕಾಗಿದ್ದು, ನಗರದ ಹೋಟೆಲ್ ಗೆ ಬರಬೇಕೆಂದು ಸೂಚಿಸಿದ್ದ ಎನ್ನಲಾಗಿದೆ. ಅಲ್ಲಿಗೆ ಬರಲು ಸಾಧ್ಯವಿಲ್ಲ ಎಂದು‌ ಮುರಳೀಧರ ಪೈ ಹೇಳಿದ್ದರು ಎನ್ನಲಾಗಿದೆ.

ಇದಾದ ಬೆನ್ನಲ್ಲೇ ಸೋಮವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಮುರಳೀಧರ ಪೈ ಅವರು ಅಂಗಡಿಯಲ್ಲಿದ್ದಾಗ ಅವರ ಪರಿಚಯಸ್ಥರೇ ಆದ ದಿನೇಶ್ ಶೆಟ್ಟಿ ಹಾಗೂ ಇತರ 4 ಮಂದಿ‌ ಏಕಾಏಕಿ ಅಂಗಡಿಗೆ ನುಗ್ಗಿ 5 ಲಕ್ಷ ರು. ಹಣ ಕೊಡಬೇಕು, ಇಲ್ಲವಾದರೆ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಕೆನ್ನೆಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ ದೂರಿನಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!