ಮಂಗಳೂರು: ತನ್ನ ಅಕ್ರಮ ಸಂಬಂಧಕ್ಕಾಗಿ ಗಂಡನನ್ನು ಕೊಲ್ಲಲು ಸುಫಾರಿ ಕೊಟ್ಟ ಪತ್ನಿ ಸೇರಿದಂತೆ ಐವರಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಉಳ್ಳಾಲ ದರ್ಗಾ ಸಮೀಪ, ಪ್ರಸ್ತುತ ಬಿ.ಸಿ.ರೋಡ್ ನಿವಾಸಿ ಅಬ್ದುಲ್ ಮುನಾಫ್ ಯಾನೆ ಮುನ್ನ(41), ಉಳ್ಳಾಲ್ ನಿವಾಸಿ ಅಬ್ದುಲ್ ರಹ್ಮಾನ್ (36), ಬೋಳಿಯಾರು ನಿವಾಸಿ ಶಬೀರ್ ಯಾನೆ ಶಬ್ಬಿ(31), ಕುತ್ತಾರ್ಪದವು ನಿವಾಸಿ ಜಮಾಲ್ ಅಹಮದ್ (38), ಪಾವೂರು ನೆಬಿಸಾ(40) ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿಗಳು. ಉಳ್ಳಾಲ ಪಾವೂರು ಇನೋಳಿ ದೆಂಡಿಂಜೆ ನಿವಾಸಿ ಇಸ್ಮಾಯಿಲ್ (59) ಕೊಲೆಯಾದ ವ್ಯಕ್ತಿ.
ಪ್ರಕರಣದ ವಿವರ;ಪಾವೂರು ನಿವಾಸಿ ಇಸ್ಮಾಯಿಲ್ ಎಂಬವರಿಗೆ ನೆಬಿಸಾ ಎಂಬಾಕೆಯ ಜೊತೆ ಎರಡನೇ ಮದುವೆಯಾಗಿತ್ತು. ನಾಲ್ವರು ಮಕ್ಕಳಿದ್ದರು, ಇಸ್ಮಾಯಿಲ್ ಬಾಡಿಗೆ ವಾಹನಗಳನ್ನು ಓಡಿಸುತ್ತಿದ್ದರು. ಆದರೆ ಗೃಹಿಣಿಯಾಗಿದ್ದ ನೆಬಿಸಾಗೆ ಬೇರೊಂದು ಅಕ್ರಮ ಸಂಬಂಧವಿತ್ತು. ಇದೇ ವಿಚಾರದಲ್ಲಿ ಇಸ್ಮಾಯಿಲ್ ಮತ್ತು ನೆಬಿಸಾ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು.
ಕೊನೆಗೆ ನೆಬಿಸಾ ಜಮಾಲ್ ಎಂಬಾತನ ಜೊತೆ ಸೇರಿ ಗಂಡ ಇಸ್ಮಾಯಿಲ್ನನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಗಂಡನ ಕೊಲೆ ಮಾಡಿದರೆ 2.50 ಲಕ್ಷ ರೂ. ಸುಫಾರಿ ನೀಡುವುದಾಗಿ ಮಾತು ಕೊಟ್ಟಿದ್ದಳು.ಸುಫಾರಿಗಾಗಿ ಅಪರಾಧಿಗಳು ನೆಬಿಸಾ ಪತಿ ಇಸ್ಮಾಯಿಲ್ನನ್ನು 2016ರ ಫೆ.16ರಂದು ಬಾಡಿಗೆ ನೆಪದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ, ಮದ್ಯಪಾನ ಮಾಡಿಸಿ ಶಿರಾಡಿಯತ್ತ ತೆರಳಿದ್ದಾರೆ. ಶಿರಾಡಿ ರಕ್ಷಿತಾರಣ್ಯದ ಕೆಂಪುಹೊಳೆ ಸಮೀಪ ತಲುಪಿದಾಗ ವಾಹನ ಕೆಟ್ಟುಹೋಗಿದೆ. ಈ ಸಂದರ್ಭದಲ್ಲಿ ವಾಹನದಿಂದ ಇಳಿದ ಆರೋಪಿಗಳು ಇಸ್ಮಾಯಿಲ್ನನ್ನು ರಕ್ಷಿತಾರಣ್ಯದೊಳಗೆ ಕರೆದೊಯ್ದು ಚೂರಿಯಿಂದ ಇರಿದು ಕೊಲೆ ಮಾಡಿ, ಬಟ್ಟೆಯನ್ನು ತೆಗೆದು ಕಾಡಿನ ತಗ್ಗು ಪ್ರದೇಶದಲ್ಲಿಟ್ಟು, ತರಗೆಲೆಗಳನ್ನು ಮುಚ್ಚಿ ಹಾಕಿ, ಬಳಿಕ ವಾಹನವನ್ನು ರಿಪೇರಿ ಮಾಡಿಸಿ ಉಪ್ಪಿನಂಗಡಿಯಲ್ಲಿ ನಿಲ್ಲಿಸಿ, ಇಸ್ಮಾಯಿಲ್ನ ರಕ್ತದ ಕಲೆಯಿರುವ ಬಟ್ಟೆ, ಮೊಬೈಲ್ಗಳನ್ನು ಉಳ್ಳಾಲ ನೇತ್ರಾವತಿ ನದಿಗೆ ಎಸೆದಿದ್ದರು. ಇದಾದ ನಂತರ ನೆಬಿಸಾ ಆರೋಪಿಗಳಿಗೆ 2.50 ಲಕ್ಷ ರೂ.ನೀಡಲು ಚಿನ್ನಾಭರಣಗಳನ್ನು ಅಡವಿಟ್ಟಿರುವುದು ತನಿಖೆ ವೇಳೆ ಬಹಿರಂಗವಾಗಿತ್ತು. ಹಾಗೆಯೇ ನೆಬಿಸಾ ತನ್ನ ಮೇಲೆ ಅನುಮಾನ ಬಾರದಿರಲೆಂದು 2016ರ ಫೆ.17ರಂದು ಗಂಡ ನಾಪತ್ತೆಯಾಗಿರುವ ಬಗ್ಗೆ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಮಧ್ಯೆ ಇಸ್ಮಾಯಿಲ್ನ 1ನೇ ಹೆಂಡತಿಯ ಮಗನಿಗೆ ಉಪ್ಪಿನಗಂಡಿಯಲ್ಲಿ ಬಿಟ್ಟು ಬಂದ ವಾಹನದಲ್ಲಿ ರಕ್ತದ ಕಲೆಗಳು ಕಂಡಿವೆ. ತಕ್ಷಣ ಚಿಕ್ಕಮ್ಮ ನೆಬಿಸಾ ವಿರುದ್ಧ ಅನುಮಾನದಿಂದ ಫೆ.18ರಂದು ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರಿಂದ ತನಿಖೆ ನಡೆಸಿದಾಗ ಸತ್ಯಾಂಶ ಬಯಲಾಗಿತ್ತು. ಅದರಂತೆ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಆರೋಪಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ಅಪರಾಧಿಗಳಾಗಿದ್ದಾರೆ. 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದೆ. ಉಳ್ಳಾಲ ಪಾವೂರು ಇನೋಳಿ ದೆಂಡಿಂಜೆ ನಿವಾಸಿ ಇಸ್ಮಾಯಿಲ್ (59) ಕೊಲೆಯಾದ ವ್ಯಕ್ತಿಯಾಗಿದ್ದಾರೆ.