- Advertisement -
- Advertisement -
ಮಂಗಳೂರು: ಚಾಕಲೇಟ್ ಎಂದರೆ ಯಾವ ಮಗುವಿಗೆ ಇಷ್ಟ ಇಲ್ಲ ಹೇಳಿ. ಆದರೆ ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡದ 8ವರ್ಷದ ಬಾಲಕನಿಗೆ ಚಾಕಲೇಟ್ ಮೃತ್ಯುವಿನ ರೂಪದಲ್ಲಿ ಬಂದಿದೆ.
ಹೌದು, ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡ ಸೈಕಲ್ ಇಬ್ರಾಹಿಂ ರವರ ಮೊಮ್ಮಗ ರಹೀಂ ಎಂಬವರ ಮಗ 8 ವರ್ಷದ ಪೈಝಾನ್ ಎಂಬ ಬಾಲಕನ ಗಂಟಲಲ್ಲಿ ಚಾಕಲೇಟ್ ಸಿಲುಕಿ ಆತ ಸಾವನ್ನಪ್ಪಿದ್ದಾನೆ.
ಬಾಲಕನು ಚಾಕಲೇಟ್ ತಿನ್ನುತ್ತಿದ್ದ ಸಂದರ್ಭದಲ್ಲಿ ಗಂಟಲಲ್ಲಿ ಚಾಕಲೇಟ್ ಸಿಲುಕಿದ್ದು ಬಾಲಕನಿಗೆ ಉಸಿರಾಡಲು ಕಷ್ಟವಾಗಿದ್ದು ಆಸ್ಪತ್ರೆಗೆ ಸಾಗಿಸುವಾಗ ಬಾಲಕ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
- Advertisement -