Sunday, June 29, 2025
Homeಕರಾವಳಿಮಂಗಳೂರು ಕೆ.ಎಸ್.ಆರ್.ಟಿ.ಸಿ ವಿಭಾಗ ನಷ್ಟದಿಂದ ಕಂಗಾಲು!

ಮಂಗಳೂರು ಕೆ.ಎಸ್.ಆರ್.ಟಿ.ಸಿ ವಿಭಾಗ ನಷ್ಟದಿಂದ ಕಂಗಾಲು!

spot_img
- Advertisement -
- Advertisement -

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೋವಿಡ್ ಕಾರಣದಿಂದಾಗಿ ಸಾಕಷ್ಟು ನಷ್ಟವನ್ನ ಅನುಭವಿಸಿದ ನಂತರ ಈಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆಯಾದರು, ಮಂಗಳೂರು ಕೆ.ಎಸ್.ಆರ್.ಟಿ.ಸಿ ವಿಭಾಗ ಚೇತರಿಕೆ ಕಾಣದೆ ಕಂಗಾಲಾಗಿದೆ.

ಈ ಹಿಂದೆ ದಿನವೊಂದಕ್ಕೆ 65 -75 ಬಸ್ ಗಳು ಮಂಗಳುರು – ಬೆಂಗಳೂರು ಮಾರ್ಗವಾಗಿ ಓಡಾಡುತ್ತಿದ್ದವು. ಆದರೆ ಈಗ ಅವುಗಳ ಸಂಖ್ಯೆ 50 ರಿಂದ 55ಕ್ಕೆ ಇಳಿದಿದೆ.ಅಂತರಾಜ್ಯ ಸಾರಿಗೆ ನಿಷೇಧ ಮತ್ತು ವರ್ಕ್ ಪ್ರಮ್ ಹೋಮ್ ದಿಂದಾಗಿ ಮಂಗಳೂರು ವಿಭಾಗಕ್ಕೆ ಸಾಕಷ್ಟು ನಷ್ಟವುಂಟಾಗಿದೆ.

ನಾವು ಚೇತರಿಕೆಯನ್ನನ ಕಾಣುತ್ತಿದ್ದೇವೆ. ಆದರೆ ಪ್ರಗತಿ ನಿಧಾನವಾಗಿದೆ. ಐ ಟಿ ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ನೀಡಿರುವ ಕಾರಣ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಬಸ್ ಗಳ ಬೇಡಿಕೆ ಕುಸಿದಿದೆ. ನಾವು ಒಂದು ದಿನಕ್ಕೆ ಸರಾಸರಿ 70 ಲಕ್ಷದವರೆಗೆ ಆದಾಯವನ್ನ ಗಳಿಸುತ್ತಿದ್ದೆವು.ಈಗ ಅದು 50 ಲಕ್ಷಕ್ಕೆ ಬಂದು ನಿಂತಿದೆ. ಮಂಗಳೂರು -ಧರ್ಮಸ್ಥಳದ ಮಾರ್ಗ ಚೆನ್ನಾಗಿ ಓಡುತ್ತಿದೆ ಎಂದು ಮಂಗಳೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ನಿರ್ವಾಣಾಧಿಕಾರಿ ಎಸ್ ಎನ್ ಅರುಣ್ ಮಾತನಾಡಿ ತಿಳಿಸಿದರು.

ಅಂತರಾಜ್ಯ ಸಾರಿಗೆ ನಿಷೇಧದಿಂದಾಗಿ ಮಂಗಳೂರು – ಕಾಸರಗೋಡು ಮತ್ತು ವಯನಾಡು ಇನ್ನಿತರ ಭಾಗಗಳಿಗೆ ಸಂಚರಿಸುತ್ತಿದ್ದ ಬಸ್ ಗಳಿಂದ ಸಾಕಷ್ಟು ಆದಾಯವನ್ನ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ.

- Advertisement -
spot_img

Latest News

error: Content is protected !!