ಮಂಗಳೂರು : ಕೆ.ಪಿ.ಟಿ.ಸಿ.ಎಲ್. 110/33/11ಕೆವಿ ಬೈಕಂಪಾಡಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳ ನಿಮಿತ್ತ ಇಂದು (ಮಾ. 7) ನಗರದ ನಾನಾ ಕಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಆ ಪ್ರಯುಕ್ತ 110 ಕೆವಿ ಬೈಕಂಪಾಡಿ ಉಪಕೇಂದ್ರದಿಂದ ಹೊರಡುವ 11 ಕೆವಿ ಲೈನ್ ಲೆಮಿನಾ, ವಿಜಯ ನಟ್ಸ್ ಮಲಬಾರ್ ಆಕ್ಸಿಜನ್, ಬಿಪಿಸಿಎಲ್, ಜೋಕಟ್ಟೆ, ಇ.ಎಲ್.ಎಫ್. ಗ್ಯಾಸ್, ತೋಕೂರು, ಕುಳಾಯಿ, ವಾಟರ್ ಸಪ್ಲೈ, ಟೆಲಿಫೋನ್ ಎಕ್ಸ್ಚೇಂಜ್, ಪ್ಲಾಮಾ ಬೋರ್ಡ್, ಬ್ಲೂವಾಟರ್ ಫೀಡರ್ಗಳ ವ್ಯಾಪ್ತಿಯಲ್ಲಿ ಅಂದು ಬೆಳಗ್ಗೆ 10ರಿಂದ ಅಪರಾಹ್ನ 2 ಗಂಟೆ ತನಕ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ.
ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ, ಬೈಕಂಪಾಡಿ, ಅಂಗರಗುಂಡಿ, ಕುಡುಂಬೂರು, ಎ.ಪಿ.ಎಂ.ಸಿ. ಮಾರ್ಕೆಟ್, ನಿತ್ಯನಗರ, ಪ್ರೀತಿನಗರ, ಸಣ್ಣನಗರ, ಪ್ರಗತಿ ನಗರ, ಎಂ.ಎಸ್. ಇ.ಝಡ್. ಕಾಲನಿ, 62ನೇ ತೋಕೂರು, ರಾಮನಗರ, ವಿಷ್ಣುಮೂರ್ತಿ ದೇವಸ್ಥಾನ, ಶಿವಗಿರಿನಗರ, ರಾಘವೇಂದ್ರ ಮಠ, ಮಿತ್ತೂಟ್ಟು ಕಾಲನಿ, ದ್ವಾರಕಾನಗರ, ಎನ್.ಐ.ಟಿ.ಕೆ., ತಡಂಬೈಲ್, ಮುಕ್ಕ, ಸಸಿಹಿತ್ಲು, ಚೇಳ್ಯಾರು, ಮಧ್ಯ, ಮುಂಚೂರು, ಕುಂಡ್ಸೆಂಪ್, ಪೆಡ್ಡಿಯಂಗಡಿ, ಕುತ್ತೆತ್ತೂರು, ಸೂರಿಂಜೆ, ರಾಜೀವ್ ನಗರ, ಸುರತ್ಕಲ್, ದೇಲಂತಬೆಟ್ಟು, ಕಾಟಿಪಳ್ಳ, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, 9ನೇ ಬ್ಲಾಕ್, ಕೃಷ್ಣಾಪುರ, ಪಡ್ರೆ, ಕೋಟೆ, ಆದರ್ಶನಗರ, ಶಿಬರೂರು, ಚೊಕ್ಕಬೆಟ್ಟು, ಕಾನ, ಕಟ್ಲ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆಯಲ್ಲಿ ತಿಳಿಸಿದೆ.