ಮಂಗಳೂರು: ಮಂಗಳೂರು ಜಂಕ್ಷನ್- ಯಶವಂತಪುರ ಮಧ್ಯೆ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಚರಿಸುವ ನಂ.16576 ಎಕ್ಸ್ಪ್ರೆಸ್ ರೈಲಿನ ಸಮಯವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
ಇದುವರೆಗೆ ನಂ.16576 ಎಕ್ಸ್ಪ್ರೆಸ್ ರೈಲು ಬೆಳಗ್ಗೆ ತಡವಾಗಿ ಹೊರಟು, ರಾತ್ರಿ ಬೆಂಗಳೂರಿಗೆ ತಲುಪುತ್ತಿದ್ದು, ಇನ್ನು ಬೇಗ ಹೊರಟು ಸಂಜೆ ಬೆಂಗಳೂರು ತಲುಪಲಿದೆ ಎಂದು ತಿಳಿದು ಬಂದಿದೆ.
ಸಮಯದ ಬದಲಾವಣೆ ಹೀಗಿದೆ; ಈಗ ಪೂರ್ವಾಹ್ನ 11.30ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಡುತ್ತಿರುವ ರೈಲು, ಇನ್ನು ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ರಾತ್ರಿ 8.45ಕ್ಕೆ ಯಶವಂತಪುರ ತಲುಪುತ್ತಿದ್ದ ರೈಲು ಇನ್ನು ಸಂಜೆ 4.30ಕ್ಕೇ ತಲುಪಲಿದೆ.
ಈ ಸಂಬಂಧ ರೈಲ್ವೇ ಸಚಿವರನ್ನು ಒತ್ತಾಯಿಸಲಾಗಿದ್ದು, ಅದಕ್ಕೆ ಪೂರಕವಾಗಿ ಸ್ಪಂದಿಸಿ ಆದೇಶವೂ ಆಗಿರುವುದು ಖುಷಿ ತಂದಿದೆ ಎಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಎಕ್ಸ್ ತಾಣದಲ್ಲಿ ತಿಳಿಸಿದ್ದಾರೆ.
ರೈಲಿನ ಪರಿಷ್ಕೃತ ವೇಳಾಪಟ್ಟಿ; ಮಂಗಳೂರು(ಬೆಳಗ್ಗೆ7), ಪಡೀಲ್ (7.20), ಬಂಟ್ವಾಳ(7.33/7.35), ಕಬಕ ಪುತ್ತೂರು (8.20/8.22), ಸುಬ್ರ ಹ್ಮಣ್ಯ(9.00/9.10), ಸಕಲೇಶ ಪುರ(11.30/11.40), ಹೊಳೆಆಲೂರು (12.14/12/15), ಹಾಸನ (ಮಧ್ಯಾಹ್ನ 1/1/10), ಚನ್ನರಾಯ ಪಟ್ಟಣ (1.21/1.22),
ಶ್ರವಣ ಬೆಳಗೊಳ(1.31/1.32), ಬಿ.ಜಿ. ನಗರ (1.58/1.59), ಯಡಿಯೂರು(2.11/2.12), ಕುಣಿಗಲ್ (2.24/2.25), ನೆಲಮಂಗಲ (2.59/3.00), ಚಿಕ್ಕ ಬಾಣಾವರ(3.44/3.45), ಯಶವಂತಪುರ(4.30).
ಈ ಸಂದರ್ಭದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್., ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಕಾರ್ಯದರ್ಶಿ ಗೀತಾ ಶೇಖರ್, ಗೃಹ ರಕ್ಷಕದಳದ ಸಿಬಂದಿ, ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್, ಸದಸ್ಯ ಅರ್ತಿಲ ಕೃಷ್ಣ ರಾವ್, ಗ್ರಾ. ಪಂ. ಉಪಾಧ್ಯಾಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪ್ರಮುಖರಾದ ಇಸ್ಮಾಯಿಲ್ ತಂಙಳ್‚ , ಕೆಂಪಿ ಮಹಮ್ಮದ್ ಉಪಸ್ಥಿತರಿದ್ದರು.