- Advertisement -
- Advertisement -
ಮಂಗಳೂರು: ಕೋಲಾಹಲ ಎಬ್ಬಿಸಿದ್ದ ಉಗ್ರರ ಪರ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದು ಈಗ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿರುವ ಪ್ರಕರಣಕ್ಕೆ ಸೌದಿ ಅರೇಬಿಯಾದ ಲಿಂಕ್ ಇದೆ ಎನ್ನಲಾಗುತ್ತಿದೆ.
ಮಂಗಳೂರು ಸೇರಿದಂತೆ ವಿವಿಧ ಕಡೆ ವಿಧ್ವಂಸಕಾರಿ ಕೃತ್ಯ ಎಸಗುವ ಸಲುವಾಗಿ ಸೌದಿ ಅರೇಬಿಯಾದಲ್ಲಿ ಒಂದು ಉಗ್ರರ ತಂಡ ಕಾರ್ಯನಿರ್ವಹಿಸುತ್ತಿದೆ. ಬಂಧಿತ ಆರೋಪಿಗಳಾದ ಮಹಮ್ಮದ್ ಶಾರೀಕ್ ಮತ್ತು ಮಾಝ್ ಮುನೀರ್ ಅಹ್ಮದ್ ಇಬ್ಬರೂ ಕೂಡ ಗೋಡೆ ಬರಹಕ್ಕೂ ಮುನ್ನ ಸೌದಿ ಅರೇಬಿಯಾದ ವ್ಯಕ್ತಿಗಳೊಂದಿಗೆ ಮಾತನಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಕರಣವನ್ನು ಮುಂದೆ ಎನ್ ಐಎಗೆ ನೀಡುವ ಸಂಭವವಿದೆ ಎನ್ನಲಾಗಿದೆ.
- Advertisement -