- Advertisement -
- Advertisement -
ಕಾರ್ಕಳ: ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡು ವಿವಾದದಲ್ಲಿ ಸಿಲುಕಿದ ನಿಟ್ಟೆ ಶಿಕ್ಷಣ ಸಂಸ್ಥೆಯ ನೌಕರನೊಬ್ಬ ಆತ್ಮಹತ್ಯೆಗೈದ ಘಟನೆ ಬೋಳ ಗ್ರಾಮದ ಮಂಜಲ್ಪಲ್ಕೆ ಮೇಲಂಗಡಿ ಎಂಬಲ್ಲಿ ನಡೆದಿದೆ.
ಗಣೇಶ್ ಪೂಜಾರಿ(48) ಆತ್ಮಹತ್ಯೆ ಮಾಡಿಕೊಂಡವರು. ಮಾರಾಟ ಮಾಡಿದ ಜಾಗದ ವಿಚಾರದಲ್ಲಿ ಇವರು ವಿವಾದದಲ್ಲಿ ಸಿಲುಕಿಕೊಂಡಿದ್ದರು. ಇದರಿಂದ ಮಾನಸಿಕವಾಗಿ ನೊಂದು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ರವಿವಾರ ಬೆಳಿಗ್ಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಒಂಟಿಯಾಗಿದ್ದ ವೇಳೆ ಗಣೇಶ್ ನೇಣುಬಿಗಿದು ಆತ್ಮಹತ್ಯೆಗೈದಿದ್ದಾರೆ. ಮರಣಪೂರ್ವದಲ್ಲಿ ಬರೆದಿದ್ದ ಪತ್ರವೊಂದು ಘಟನಾ ಸ್ಥಳದಲ್ಲಿ ಲಭ್ಯವಾಗಿದ್ದು, ಅದನ್ನು ಪೊಲೀಸರು ವಶಪಡಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.
- Advertisement -