Friday, June 27, 2025
Homeಕರಾವಳಿಉಡುಪಿಬ್ರಹ್ಮಾವರ: ನಡೆದುಕೊಂಡು ಹೋಗುತ್ತಿದ್ದ ವೇಳೆ ಗದ್ದೆಗೆ ಬಿದ್ದು ವ್ಯಕ್ತಿ ಸಾವು

ಬ್ರಹ್ಮಾವರ: ನಡೆದುಕೊಂಡು ಹೋಗುತ್ತಿದ್ದ ವೇಳೆ ಗದ್ದೆಗೆ ಬಿದ್ದು ವ್ಯಕ್ತಿ ಸಾವು

spot_img
- Advertisement -
- Advertisement -

ಬ್ರಹ್ಮಾವರ: ಗದ್ದೆಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಗದ್ದೆಗೆ ಬಿದ್ದು ಸಾವನ್ನಪ್ಪಿದ ಘಟನೆ ಜ.10ರಂದು ರಾತ್ರಿ ವೇಳೆ 33ನೇ ಶೀರೂರು ಗ್ರಾಮದ ಮರ್ಲಾಡಿ ಎಂಬಲ್ಲಿ ನಡೆದಿದೆ. ಮೃತರನ್ನು ಶೀರೂರು ಗ್ರಾಮದ ಮರ್ಲಾಡಿ ನಿವಾಸಿ ಅಶೋಕ ಶೆಟ್ಟಿ, (57) ಎಂದು ಗುರುತಿಸಲಾಗಿದೆ.

ಇವರು ಮನೆ ಹತ್ತಿರದವರಿಗೆ ಹಾಲನ್ನು ಡೇರಿಗೆ ಕೊಡುವಂತೆ ಹೇಳಿ ಗಡಿಬಿಡಿಯಿಂದ ನಡೆದು ಬರುತ್ತಿರುವಾಗ ಈ ಘಟನೆ ಸಂಭವಿಸಿದೆ. ಕೆಸರು ಜಾಗದಲ್ಲಿ ಮುಖ ಅಡಿಯಾಗಿ ಬಿದ್ದು ಉಸಿರುಗಟ್ಟಿ ಅಥವಾ ಹೃದಯಾಘಾತದಿಂದ ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!