- Advertisement -
- Advertisement -
ಬೈಂದೂರು : ಗೆಳೆಯರೊಂದಿಗೆ ಸಮುದ್ರದಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಸೋಮೇಶ್ವರ ಬೀಚ್ ಬಳಿ ನಡೆದಿದೆ .
ಬವಳಾಡಿಯ ಮಂಜುನಾಥ ದೇವಾಡಿಗ ಎಂಬುವವರ ಪುತ್ರ ಶಶಿಧರ್ ( 22 ) ಮೃತ ದುರ್ದೈವಿ . ಉಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಶಿಧರ್ ಎಂಬ ಯುವಕ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ಸೋಮೇಶ್ವರ ದೊಂಬೆ ನಡುವಿನ ಪ್ರದೇಶದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು . ಈ ವೇಳೆ ಅಲೆಗಳ ರಭಸಕ್ಕೆ ನಿಯಂತ್ರಣ ಕಳೆದುಕೊಂಡು ತೆರೆಯೊಂದಿಗೆ ತೇಲೆಹೊಗಿದ್ದಾರೆ .
ಆ ಕೂಡಲೇ ಸ್ನೇಹಿತನೋರ್ವ ಆತನ ರಕ್ಷಣೆಗೆ ಧಾವಿಸಿ ಹಿಡಿದುಕೊಂಡರೂ , ದಡಕ್ಕೆ ತರಲು ಸಾಧ್ಯವಾಗದೇ ಸಹಾಯಕ್ಕಾಗಿ ಯಾಚಿಸಿದ್ದಾನೆ . ಸ್ಥಳೀಯರು ರೋಪ್ ಮೂಲಕ ಇಬ್ಬರನ್ನು ದಡಕ್ಕೆ ತಂದಿದ್ದಾರೆ . ಅಷ್ಟರಲ್ಲೇ ಶಶಿಧರ್ ಮೃತಪಟ್ಟಿದ್ದ ಎನ್ನಲಾಗಿದೆ.
- Advertisement -