Thursday, May 2, 2024
Homeಕರಾವಳಿವಿಶೇಷ ಚೇತನರಿಗೆ ಆಶ್ರಯವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ : ಶಾಸಕ ರಮೇಶ್ ಭೂಸನೂರ ಅವರಿಂದ...

ವಿಶೇಷ ಚೇತನರಿಗೆ ಆಶ್ರಯವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ : ಶಾಸಕ ರಮೇಶ್ ಭೂಸನೂರ ಅವರಿಂದ ವಿವಿಧ ಸಲಕರಣೆಗಳ ವಿತರಣೆ

spot_img
- Advertisement -
- Advertisement -

ಸಿಂದಗಿ : ಪ್ರತಿಯೊಬ್ಬ ಮನುಷ್ಯನಿಗೆ ಸಮಾಜದಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಕೆಲವರಿಗೆ ಈ ಸಾಮರ್ಥ್ಯವಿದ್ದರೆ ಹಲವರು ಸಂತೋಷವನ್ನು ಹುಟ್ಟಿನಿಂದಲೇ, ಯೌವನದಲ್ಲಿ ಅಥವಾ ವೃದ್ಧಾಪ್ಯದಲ್ಲಿ ಇತರ ಕಾರಣಗಳಿಂದ ಕಳೆದುಕೊಂಡಿರುತ್ತಾರೆ.

ಕೆಲವರಿಗೆ ಹುಟ್ಟಿನಿಂದಲೇ ಕುರುಡು, ಅಂಗವಿಕಲತೆ ಸಮಸ್ಯೆಗಳು ಬಂದರೆ ಇನ್ನು ಕೆಲವರಿಗೆ ದುರದೃಷ್ಟವಶಾತ್ ಅಪಘಾತಗಳು, ಮಾರಕ ರೋಗಗಳು ಹಾಗೂ ವಯಸ್ಸಾದಾಗ ಕಾಣಿಸಿಕೊಳ್ಳುತ್ತದೆ.

ಇದನ್ನು ಸಂಪೂರ್ಣ ಸರಿಪಡಿಸಲು ಆಗದಿದ್ದರೆ ಕೆಲವೊಂದು ಪರಿಹಾರಗಳಿವೆ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಪೂಜ್ಯರು ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳನ್ನು ನೀಡುವ ಜನಮಂಗಲವೆನ್ನುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಕಾರ್ಯಕ್ರಮದಲ್ಲಿ ಗಾಲಿಕುರ್ಚಿ, (ವೀಲ್ ಚಯರ್) ನೀರಹಾಸಿಗೆ (ವಾಟರ್ ಬೆಡ್), ನಡುಗೋಲು, (ಯು ಶೇಪ್ ವಾಕರ್) ಊರುಗೋಲು (ಆಕ್ಸಿಲರಿ ಕ್ರಚಸ್), ಏಕಕಾಲಿನ ಕೈಗೋಲು (ಸಿಂಗಲ್ ಲೆಗ್ ವಾಕಿಂಗ್ ಸ್ಟಿಕ್), ಮೊದಲಾದ ಸಲಕರಣೆಗಳನ್ನು ಮಾನ್ಯ ಶಾಸಕರಾದ ರಮೇಶ್ ಭೂಸನೂರ ರವರಿಂದ ವಿತರಿಸಲಾಯಿತು.

ಈ ಸಂದರ್ಭ ಸಿಂದಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಮೇಶ್ ಭೂಸನೂರ ರವರು ಕೊರೋನಾದಂತಹ ತುರ್ತು ಸಂದರ್ಭದಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಯ ಕಾರ್ಯಕ್ರಮದ ಪರಿಕಲ್ಪನೆಯನ್ನು ನಾನು ಕಣ್ಣಾರೆ ಕಂಡಿದ್ದು ಇದನ್ನು ಮನಸಾರೆ ಕೊಂಡಾಡುತ್ತೇನೆ.

ಧರ್ಮಸ್ಥಳ ಪುಣ್ಯ ಕ್ಷೇತ್ರದ ಅಭಯ ಹಸ್ತದ ನೆರಳು ನನ್ನ ವೈಯಕ್ತಿಕ ಸಂಸಾರ ಜೀವನದಲ್ಲೂ ಇದೆ ಎಂದು ತಿಳಿಸುತ್ತಾ, ಸಾಮಾಜಿಕ ಕಳಕಳಿ, ಬಡ ವಿದ್ಯಾರ್ಥಿಗಳಿಗೆ ವಿದ್ಯಾ ದಾನ, ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಸಮಾಜಮುಖಿ ಕೆಲಸಗಳು ಸಮಾಜದ ಅಸಹಾಯಕರು, ನಿರ್ಗತಿಕರು, ದುರ್ಬಲರ ಸೇವೆ ಮಾಡುವುದು ದೇವರ ಸೇವೆ ಎಂದು ಹೇಳಿದರು.

ಇನ್ನು ಈ ರೀತಿಯ ಕಾರ್ಯಕ್ರಮಗಳು ಯೋಜನೆಯಿಂದ ಮೂಡಿ ಬರಲಿ ಇದರೊಂದಿಗೆ ನಾವು ಕೈ ಜೋಡಿಸುತ್ತೇವೆ ಎಂದು ಪೂಜ್ಯ ಖಾವಂದರು ದಂಪತಿಗಳಿಗೆ ವಂದಿಸಿದರು. ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನರು, ಆರೋಗ್ಯ ರಕ್ಷಾ ಫಲಾನುಭವಿಗಳು, ಜ್ಞಾನದೀಪ ಶಿಕ್ಷಕರು, ಸುಜ್ಞಾನನಿಧಿ ಫಲಾನುಭವಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಕ್ಷೇತ್ರ ಯೋಜನಾಧಿಕಾರಿಗಳಾದ ಗಿರೀಶ್ ಕುಮಾರ್ ಎಮ್, ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ, ಯೋಜನೆಯ ಕಾರ್ಯ ವೈಖರಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಸುಶಾಂತ ಪೂಜಾರಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!